ರಮ್ಜಾನ್ ಹಬ್ಬಕ್ಕಾಗಿ ಹೊರ ಜಿಲ್ಲೆ ಹಾಗೂ ರಾಜ್ಯಕ್ಕೆ ಹೋಗಿದ್ದ ಜನ ವಾಪಸ್ ಬರುತ್ತಿದ್ದರು. ನಗರಕ್ಕೆ ಬಂದಿದ್ದವರು ವಾಪಸ್ ತಮ್ಮೂರಿಗೆ ಹೊರಟಿದ್ದರು. ಹೀಗಾಗಿ, ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟಣೆ ಹೆಚ್ಚಿತ್ತು. ಅದೇ ವೇಳೆಯಲ್ಲೇ ಪರಮೇಶ್ವರ್ ಅವರಿಗಾಗಿ ವಾಹನಗಳ ಮಾರ್ಗ ಬದಲಾವಣೆ ಮಾಡಿದ್ದರಿಂದ, ಜನ ಮತ್ತಷ್ಟು ಪರದಾಡುವಂತಾಯಿತು.