ಆರಂಭದಲ್ಲಿ ವಾಹನ ಹತ್ತಿದ ಪ್ರಕಾಶ್ ರೈ ನೆರೆದ ಜನರತ್ತ ಕೈಬೀಸಿದರು. ಯುವಕರು, ಅಭಿಮಾನಿಗಳು ಅವರ ವಾಹನದ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಅನುಮತಿ ನಿರಾಕರಿಸಿದರು. ಅಲ್ಲದೆ, ಬೈಕ್ ರ್ಯಾಲಿಗೂ ಅವಕಾಶ ನೀಡಲಿಲ್ಲ. ಹೀಗಾಗಿ ಪ್ರಕಾಶ್ ರೈ ಕಾರಿನಲ್ಲೇ ಜಗತ್ ವೃತ್ತಕ್ಕೆ ಬಂದರು.