ಉಡುಪಿ: ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಉಡುಪಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.
ಚುನಾವಣಾ ಆಯೋಗದ ಆದೇಶದಂತೆ ಗೌಪ್ಯ ಮತದಾನಕ್ಕೆ ಬದ್ಧನಾಗಿ ಮತ ಚಲಾಯಿಸಿದ್ದೇನೆ. ದೇಶ ಹಾಗೂ ರಾಜ್ಯಕ್ಕೆ ಒಳಿತಾಗಲಿ ಎಂದು ಶ್ರೀ ಕೃಷ್ಣನನ್ನು ಪ್ರಾರ್ಥಿಸಿದ್ದೇನೆ. ಜನರ ಹಾಗೂ ದೇವರ ಇಚ್ಛೆಯಂತೆ ಫಲಿತಾಂಶ ಬರಲಿದೆ ಎಂದು ಹೇಳಿದರು.