<p><strong>ಬಾಳೆಬೈಲು (ತೀರ್ಥಹಳ್ಳಿ,ಶಿವಮೊಗ್ಗ ಜಿಲ್ಲೆ): </strong>ನಂದಿತಾ ಸಾವಿನ ಪ್ರಕರಣದ ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು ಪ್ರಕರಣದ ಸುತ್ತ ಸೃಷ್ಟಿಯಾಗಿರುವ ಹಲವು ಗೊಂದಲಗಳ ನಿವಾರಣೆಗೆ ಗುರುವಾರವೂ ಹೆಚ್ಚಿನ ಪ್ರಾಶಸ್ತ್ಯ ನೀಡಿದರು.<br /> <br /> <strong>ಸಿಐಡಿ ಅಧಿಕಾರಿಗಳನ್ನು ಕಾಡಿದ ಪ್ರಶ್ನೆಗಳು</strong><br /> *ಅ.30ರಂದು ಬೆಳಿಗ್ಗೆ ಶಾಲೆಗೆ ತೆರಳಿದ್ದು, ಅಪಹರಣವಾಗುವ ಮುನ್ನ ಜತೆಗಿದ್ದ ಸಹಪಾಠಿ, ಸಂಬಂಧಿ (ನಂದಿತಾ ತಂದೆ ಟಿ.ಜಿ.ಕೃಷ್ಣ ಅವರ ತಂಗಿಯ ಮಗ) ಕುಶಾಲ್ಗೆ ‘ಮುಂದೆ ಹೋಗಿರು, ಬರುತ್ತೇನೆ’ ಎಂದು ಹೇಳಿದ ನಂದಿತಾ ಹಿಂದೆಯೇ ಉಳಿದುಕೊಂಡಿದ್ದು ಏಕೆ?<br /> <br /> *ಅಪಹರಣವಾದ ನಂತರ ಆನಂದಗಿರಿ ಗುಡ್ಡದಲ್ಲಿ ಮೊದಲು ಕಾಣಿಸಿಕೊಂಡಿದ್ದು, ಕಟ್ಟಿಗೆ ತರಲು ಹೋಗಿದ್ದ ಕಮಲಮ್ಮ ಅವರ ಕಣ್ಣಿಗೆ.<br /> <br /> ಕಮಲಮ್ಮ ಗುಡ್ಡ ಹತ್ತಿ ಹೋದಾಗ ಅಲ್ಲಿ ಇದ್ದದ್ದು ನಂದಿತಾ ಒಬ್ಬಳೇ. ಕಮಲಮ್ಮ ಬರುವ ಸಾಕಷ್ಟು ಸಮಯ ಮೊದಲೇ ಅಪರಾಧಿಗಳು ಆಕೆಯನ್ನು ಗುಡ್ಡದ ಮೇಲೆ ಬಿಟ್ಟು ಪರಾರಿಯಾದದ್ದು ಏಕೆ?<br /> <br /> *ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದ ಕಮಲಮ್ಮ ನಂತರ ನಂದಿತಾ ಮನೆಯವರಿಗೆ ವಿಷಯ ತಿಳಿಸಿ, ಆಕೆಯನ್ನು</p>.<table align="right" border="1" cellpadding="1" cellspacing="1" style="width: 380px;"> <thead> <tr> <th scope="col" style="width: 372px;"> ನಂದಿತಾ ಸಾವು–ಬದುಕಿನ ನಡುವೆ ಇದ್ದಳು...</th> </tr> </thead> <tbody> <tr> <td style="width: 372px;"> ನಂದಿತಾ ಪ್ರಾಥಮಿಕ ಚಿಕಿತ್ಸೆಗಾಗಿ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ತಂದಾಗ ‘ಕೆಲವರು ಬಲವಂತವಾಗಿ ನೀರಿನಲ್ಲಿ ಏನೋ ಹಾಕಿ ಕುಡಿಸಿದರು’ ಎಂದು ಹೇಳಿಕೆ ನೀಡಿದರೂ ಪೊಲೀಸರಿಗೆ ಮಾಹಿತಿ ನೀಡದ ವೈದ್ಯಾಧಿಕಾರಿ ಡಾ.ಗಿರೀಶ್ ಅವರನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದರು.‘ಅಂದು ನಂದಿತಾ ಸಾವು–ಬದುಕಿನ ನಡುವೆ ಸೆಣಸುತ್ತಿದ್ದಳು. ಹಾಗಾಗಿ, ಪ್ರಾಥಮಿಕ ಚಿಕಿತ್ಸೆ ನೀಡಿದ ಕೂಡಲೇ, ಸುಸಜ್ಜಿತ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಶಿಫಾರಸು ಮಾಡಿದೆ. ಆ ಗಡಿಬಿಡಿಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ’ ಎಂದು ಡಾ.ಗಿರೀಶ್ ಪ್ರತಿಕ್ರಿಯೆ ನೀಡಿದರು. ಈ ನಡುವೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ ನಾಯ್ಕ ಘಟನೆ ಮತ್ತು ವೈದ್ಯರ ನಿರ್ಲಕ್ಷ್ಯ ಕುರಿತಂತೆ ವರದಿ ಸಲ್ಲಿಸಿದ್ದಾರೆ.</td> </tr> </tbody> </table>.<p>ಕಳುಹಿಸಿಕೊಟ್ಟ ನಂತರ ಮನೆಯವರು ವಿಷಯ ಮುಚ್ಚಿಟ್ಟದ್ದು ಏಕೆ?<br /> <br /> *ಮನೆಗೆ ಹೋದಾಗ ಆರೋಗ್ಯವಾಗಿಯೇ ಇದ್ದ ನಂದಿತಾಗೆ ಸಂಜೆಯ ನಂತರ ವಾಂತಿ ಆರಂಭವಾಗಿದ್ದು ಏಕೆ? ಹಲವು ಬಾರಿ ವಾಂತಿಯಾಗಿ ಆಕೆ ಬಳಲಿದರೂ, ಬೆಳಿಗ್ಗೆವರೆಗೆ ಪೋಷಕರು ಆಕೆಯನ್ನು ಏಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ?<br /> <br /> *ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಗೆ ನಂದಿತಾಳನ್ನು ಕರೆದುಕೊಂಡು ಹೋದಾಗ ಆಕೆ, ‘ಕೆಲವರು ಬಲವಂತದಿಂದ ನೀರಲ್ಲಿ ಏನೋ ಹಾಕಿ ಕುಡಿಸಿದರು’ ಎಂದು ನೀಡಿದ ಹೇಳಿಕೆ ಬರೆದುಕೊಂಡ ನಂತರವೂ ಆ ವೈದ್ಯರು, ಪೊಲೀಸರಿಗೆ ಏಕೆ ಮಾಹಿತಿ ನೀಡಲಿಲ್ಲ?<br /> <br /> *ಮಣಿಪಾಲದ ವೈದ್ಯರು ಅತ್ಯಾಚಾರದ ಯತ್ನವೇ ನಡೆದಿಲ್ಲ ಎಂದು ಯಾವ ಆಧಾರದಲ್ಲಿ ವರದಿ ನೀಡಿದರು. ಅಂದು ಆಕೆ ಧರಿಸಿದ್ದ ಬಟ್ಟೆ, ಜೊತೆಗಿದ್ದ ನೀರಿನ ಬಾಟಲ್ ಏನಾಯಿತು?<br /> <br /> *ಆಕೆ ಮೃತಪಟ್ಟ ನಂತರ ದೂರು ದಾಖಲಿಸಲು 7–8 ಗಂಟೆ ಏಕೆ ವಿಳಂಬ ಮಾಡಲಾಯಿತು?<br /> *ಈ ಪ್ರಕರಣ ಅಷ್ಟೊಂದು ಸೂಕ್ಷ್ಮವಾಗಿದ್ದರೂ ಮೃತ ದೇಹ ಸುಡುವುದನ್ನು ಸ್ಥಳೀಯ ಪೊಲೀಸರು ಅಥವಾ ಸಂಬಂಧಿಸಿದವರು ಏಕೆ ತಡೆಯಲಿಲ್ಲ?<br /> <br /> ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಿಐಡಿ ತಂಡ ವಿಚಾರಣೆ ನಡೆಸಿತು. ನಂದಿತಾ ಅಪಹರಣಕ್ಕೆ ಒಳಗಾದ ಬಾಳೆಬೈಲಿನ ಮುಖ್ಯ ರಸ್ತೆ, ಆನಂದಗಿರಿ ಗುಡ್ಡ, ಆಕೆಯನ್ನು ಮೊದಲು ನೋಡಿದ ಮಹಿಳೆಯ ಮನೆ, ನಂದಿತಾ ಮನೆ, ಆಕೆಯನ್ನು ಮೊದಲು ಚಿಕಿತ್ಸೆಗಾಗಿ ದಾಖಲಿಸಿದ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅಧಿಕಾರಿಗಳು ಕೆಲ ಮಹತ್ವದ ವಿವರಗಳನ್ನು ಕಲೆ ಹಾಕಿದರು.<br /> <br /> ನಂದಿತಾ ತಾಯಿ ವಿಮಲಾ, ತಂದೆ ಟಿ.ಜಿ.ಕೃಷ್ಣ, ಪ್ರಮುಖ ಸಾಕ್ಷಿ ಕಮಲಮ್ಮ, ಜಯಮ್ಮ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಿರೀಶ್, ನಂದಿತಾ ಅಜ್ಜಿ ಹಾಗೂ ಸಂಬಂಧಿಗಳನ್ನು ವಿಚಾರಣೆಗೆ ಒಳಪಡಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಳೆಬೈಲು (ತೀರ್ಥಹಳ್ಳಿ,ಶಿವಮೊಗ್ಗ ಜಿಲ್ಲೆ): </strong>ನಂದಿತಾ ಸಾವಿನ ಪ್ರಕರಣದ ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು ಪ್ರಕರಣದ ಸುತ್ತ ಸೃಷ್ಟಿಯಾಗಿರುವ ಹಲವು ಗೊಂದಲಗಳ ನಿವಾರಣೆಗೆ ಗುರುವಾರವೂ ಹೆಚ್ಚಿನ ಪ್ರಾಶಸ್ತ್ಯ ನೀಡಿದರು.<br /> <br /> <strong>ಸಿಐಡಿ ಅಧಿಕಾರಿಗಳನ್ನು ಕಾಡಿದ ಪ್ರಶ್ನೆಗಳು</strong><br /> *ಅ.30ರಂದು ಬೆಳಿಗ್ಗೆ ಶಾಲೆಗೆ ತೆರಳಿದ್ದು, ಅಪಹರಣವಾಗುವ ಮುನ್ನ ಜತೆಗಿದ್ದ ಸಹಪಾಠಿ, ಸಂಬಂಧಿ (ನಂದಿತಾ ತಂದೆ ಟಿ.ಜಿ.ಕೃಷ್ಣ ಅವರ ತಂಗಿಯ ಮಗ) ಕುಶಾಲ್ಗೆ ‘ಮುಂದೆ ಹೋಗಿರು, ಬರುತ್ತೇನೆ’ ಎಂದು ಹೇಳಿದ ನಂದಿತಾ ಹಿಂದೆಯೇ ಉಳಿದುಕೊಂಡಿದ್ದು ಏಕೆ?<br /> <br /> *ಅಪಹರಣವಾದ ನಂತರ ಆನಂದಗಿರಿ ಗುಡ್ಡದಲ್ಲಿ ಮೊದಲು ಕಾಣಿಸಿಕೊಂಡಿದ್ದು, ಕಟ್ಟಿಗೆ ತರಲು ಹೋಗಿದ್ದ ಕಮಲಮ್ಮ ಅವರ ಕಣ್ಣಿಗೆ.<br /> <br /> ಕಮಲಮ್ಮ ಗುಡ್ಡ ಹತ್ತಿ ಹೋದಾಗ ಅಲ್ಲಿ ಇದ್ದದ್ದು ನಂದಿತಾ ಒಬ್ಬಳೇ. ಕಮಲಮ್ಮ ಬರುವ ಸಾಕಷ್ಟು ಸಮಯ ಮೊದಲೇ ಅಪರಾಧಿಗಳು ಆಕೆಯನ್ನು ಗುಡ್ಡದ ಮೇಲೆ ಬಿಟ್ಟು ಪರಾರಿಯಾದದ್ದು ಏಕೆ?<br /> <br /> *ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದ ಕಮಲಮ್ಮ ನಂತರ ನಂದಿತಾ ಮನೆಯವರಿಗೆ ವಿಷಯ ತಿಳಿಸಿ, ಆಕೆಯನ್ನು</p>.<table align="right" border="1" cellpadding="1" cellspacing="1" style="width: 380px;"> <thead> <tr> <th scope="col" style="width: 372px;"> ನಂದಿತಾ ಸಾವು–ಬದುಕಿನ ನಡುವೆ ಇದ್ದಳು...</th> </tr> </thead> <tbody> <tr> <td style="width: 372px;"> ನಂದಿತಾ ಪ್ರಾಥಮಿಕ ಚಿಕಿತ್ಸೆಗಾಗಿ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ತಂದಾಗ ‘ಕೆಲವರು ಬಲವಂತವಾಗಿ ನೀರಿನಲ್ಲಿ ಏನೋ ಹಾಕಿ ಕುಡಿಸಿದರು’ ಎಂದು ಹೇಳಿಕೆ ನೀಡಿದರೂ ಪೊಲೀಸರಿಗೆ ಮಾಹಿತಿ ನೀಡದ ವೈದ್ಯಾಧಿಕಾರಿ ಡಾ.ಗಿರೀಶ್ ಅವರನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದರು.‘ಅಂದು ನಂದಿತಾ ಸಾವು–ಬದುಕಿನ ನಡುವೆ ಸೆಣಸುತ್ತಿದ್ದಳು. ಹಾಗಾಗಿ, ಪ್ರಾಥಮಿಕ ಚಿಕಿತ್ಸೆ ನೀಡಿದ ಕೂಡಲೇ, ಸುಸಜ್ಜಿತ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಶಿಫಾರಸು ಮಾಡಿದೆ. ಆ ಗಡಿಬಿಡಿಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ’ ಎಂದು ಡಾ.ಗಿರೀಶ್ ಪ್ರತಿಕ್ರಿಯೆ ನೀಡಿದರು. ಈ ನಡುವೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ ನಾಯ್ಕ ಘಟನೆ ಮತ್ತು ವೈದ್ಯರ ನಿರ್ಲಕ್ಷ್ಯ ಕುರಿತಂತೆ ವರದಿ ಸಲ್ಲಿಸಿದ್ದಾರೆ.</td> </tr> </tbody> </table>.<p>ಕಳುಹಿಸಿಕೊಟ್ಟ ನಂತರ ಮನೆಯವರು ವಿಷಯ ಮುಚ್ಚಿಟ್ಟದ್ದು ಏಕೆ?<br /> <br /> *ಮನೆಗೆ ಹೋದಾಗ ಆರೋಗ್ಯವಾಗಿಯೇ ಇದ್ದ ನಂದಿತಾಗೆ ಸಂಜೆಯ ನಂತರ ವಾಂತಿ ಆರಂಭವಾಗಿದ್ದು ಏಕೆ? ಹಲವು ಬಾರಿ ವಾಂತಿಯಾಗಿ ಆಕೆ ಬಳಲಿದರೂ, ಬೆಳಿಗ್ಗೆವರೆಗೆ ಪೋಷಕರು ಆಕೆಯನ್ನು ಏಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ?<br /> <br /> *ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಗೆ ನಂದಿತಾಳನ್ನು ಕರೆದುಕೊಂಡು ಹೋದಾಗ ಆಕೆ, ‘ಕೆಲವರು ಬಲವಂತದಿಂದ ನೀರಲ್ಲಿ ಏನೋ ಹಾಕಿ ಕುಡಿಸಿದರು’ ಎಂದು ನೀಡಿದ ಹೇಳಿಕೆ ಬರೆದುಕೊಂಡ ನಂತರವೂ ಆ ವೈದ್ಯರು, ಪೊಲೀಸರಿಗೆ ಏಕೆ ಮಾಹಿತಿ ನೀಡಲಿಲ್ಲ?<br /> <br /> *ಮಣಿಪಾಲದ ವೈದ್ಯರು ಅತ್ಯಾಚಾರದ ಯತ್ನವೇ ನಡೆದಿಲ್ಲ ಎಂದು ಯಾವ ಆಧಾರದಲ್ಲಿ ವರದಿ ನೀಡಿದರು. ಅಂದು ಆಕೆ ಧರಿಸಿದ್ದ ಬಟ್ಟೆ, ಜೊತೆಗಿದ್ದ ನೀರಿನ ಬಾಟಲ್ ಏನಾಯಿತು?<br /> <br /> *ಆಕೆ ಮೃತಪಟ್ಟ ನಂತರ ದೂರು ದಾಖಲಿಸಲು 7–8 ಗಂಟೆ ಏಕೆ ವಿಳಂಬ ಮಾಡಲಾಯಿತು?<br /> *ಈ ಪ್ರಕರಣ ಅಷ್ಟೊಂದು ಸೂಕ್ಷ್ಮವಾಗಿದ್ದರೂ ಮೃತ ದೇಹ ಸುಡುವುದನ್ನು ಸ್ಥಳೀಯ ಪೊಲೀಸರು ಅಥವಾ ಸಂಬಂಧಿಸಿದವರು ಏಕೆ ತಡೆಯಲಿಲ್ಲ?<br /> <br /> ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಿಐಡಿ ತಂಡ ವಿಚಾರಣೆ ನಡೆಸಿತು. ನಂದಿತಾ ಅಪಹರಣಕ್ಕೆ ಒಳಗಾದ ಬಾಳೆಬೈಲಿನ ಮುಖ್ಯ ರಸ್ತೆ, ಆನಂದಗಿರಿ ಗುಡ್ಡ, ಆಕೆಯನ್ನು ಮೊದಲು ನೋಡಿದ ಮಹಿಳೆಯ ಮನೆ, ನಂದಿತಾ ಮನೆ, ಆಕೆಯನ್ನು ಮೊದಲು ಚಿಕಿತ್ಸೆಗಾಗಿ ದಾಖಲಿಸಿದ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅಧಿಕಾರಿಗಳು ಕೆಲ ಮಹತ್ವದ ವಿವರಗಳನ್ನು ಕಲೆ ಹಾಕಿದರು.<br /> <br /> ನಂದಿತಾ ತಾಯಿ ವಿಮಲಾ, ತಂದೆ ಟಿ.ಜಿ.ಕೃಷ್ಣ, ಪ್ರಮುಖ ಸಾಕ್ಷಿ ಕಮಲಮ್ಮ, ಜಯಮ್ಮ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಿರೀಶ್, ನಂದಿತಾ ಅಜ್ಜಿ ಹಾಗೂ ಸಂಬಂಧಿಗಳನ್ನು ವಿಚಾರಣೆಗೆ ಒಳಪಡಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>