ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿನ್ನೆ ರಾಮದಾಸ್.. ಇಂದು ಕಾಗೇರಿ..

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸಚಿವ ಎಸ್.ಎ.ರಾಮದಾಸ್ ಅವರನ್ನು ಸರ್ವಾಧಿಕಾರಿ ಎಂದು ಬಣ್ಣಿಸಿ ಮಂಗಳವಾರ ಗಮನ ಸೆಳೆದ ಬಿಜೆಪಿಯ ಶಂಕರಲಿಂಗೇಗೌಡ ಬುಧವಾರ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ತರಾಟೆಗೆ ತೆಗೆದುಕೊಂಡರು.

`ನಾನು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಒಂದು ತಿಂಗಳ ಸಮಯ ಕೋರಿದ್ದಾರೆ. ಇಂತಹ ನಿಷ್ಪ್ರಯೋಜಕ, ಬೇಜವಾಬ್ದಾರಿ ಶಿಕ್ಷಣ ಸಚಿವರ ವರ್ತನೆ ಸರಿಯಲ್ಲ~ ಎಂದು ಏರುಧ್ವನಿಯಲ್ಲಿ ಆಕ್ಷೇಪಿಸಿದರು. `ಇವರಿಗೆ ಕೀಳರಿಮೆ. ದುರಹಂಕಾರ...~ ಹೀಗೆ ಬೈಗುಳ ಆರಂಭಿಸಿದರು.

ಇತ್ತ ಕಾಗೇರಿ ಸೇರಿದಂತೆ ಎಲ್ಲ ಸಚಿವರೂ ನಗುತ್ತಿದ್ದರೆ, ಅತ್ತ ಪ್ರತಿಪಕ್ಷದ ಸದಸ್ಯರಿಂದ ಶೇಮ್.. ಶೇಮ್... ಎಂಬ ಉದ್ಗಾರ. ಗೌಡರ ಬೈಗುಳದಿಂದ ರೋಮಾಂಚನಗೊಂಡ ಪ್ರತಿಪಕ್ಷ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.

ಕೊನೆಗೆ ಕಾಗೇರಿ ಮಾತನಾಡಿ, `ಚಾಮರಾಜನಗರದ ಕ್ಷೇತ್ರದ ಶಾಸಕ ಶಂಕರಲಿಂಗೇಗೌಡ ಮತ್ತು ನಾನು ಇಬ್ಬರೂ ಒಳ್ಳೆಯ ಸ್ನೇಹಿತರು....~ ಎಂದು ಹೇಳುತ್ತಿದ್ದಂತೆ ಮತ್ತೆ ಆಕ್ಷೇಪ ಎತ್ತಿದ ಗೌಡರು `ನನ್ನ ಕ್ಷೇತ್ರದ ಹೆಸರು ಚಾಮರಾಜನಗರ ಅಲ್ಲ; `ಚಾಮರಾಜ~. ಕ್ಷೇತ್ರದ ಹೆಸರು ತಿಳಿಯದವರೆಲ್ಲ ಮಂತ್ರಿಗಳು~ ಎಂದು ಮತ್ತೆ ಕಿಚಾಯಿಸಿದರು.

`ಕಂಪ್ಯೂಟರ್ ಯುಗದಲ್ಲಿ ತಿಂಗಳು ಏಕೆ ಬೇಕು~ ಎಂದು ಗೌಡರು ಮತ್ತೆ ಆಕ್ಷೇಪಿಸಿದರು. ಕೊನೆಗೆ ಉಪಸಭಾಧ್ಯಕ್ಷ ಯೋಗೀಶ್ ಭಟ್ ಅವರು 15 ದಿನದಲ್ಲಿ ಉತ್ತರ ಒದಗಿಸುವಂತೆ ಸಚಿವರಿಗೆ ಸೂಚಿಸಿ, ವಿಷಯವನ್ನು ಸಮಾಪ್ತಿಗೊಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT