ಅವ್ಯವಹಾರ ಆರೋಪದ ಮೇಲೆ ಕರ ಸಂಗ್ರಹಕಾರ ವಾಸುದೇವ ಜಾಧವನನ್ನು ಈಚೆಗೆ ಗ್ರಾಮ ಪಂಚಾಯಿತಿಯು ಗೊತ್ತುವಳಿ ಮಂಡಿಸಿ ಸೇವೆಯಿಂದ ಅಮಾನತುಗೊಳಿಸಿತ್ತು. ಆದರೆ ಆತ ಹಾಗೂ ಉಳಿದಿಬ್ಬರು ಸೇರಿಕೊಂಡು ಅಮಾನತು ಆದೇಶ ರದ್ದುಪಡಿಸುವಂತೆ ಒತ್ತಡ ಹೇರುತ್ತಿದ್ದರು. ಇದಕ್ಕಾಗಿ ಮಾಜಿ ಜಿ.ಪಂ. ಸದಸ್ಯರು, ರಾಜಕೀಯ ಮುಖಂಡರ ಪತ್ರ, ಒತ್ತಡಗಳನ್ನು ತರುತ್ತಿದ್ದರು. ಮಂದಾಕಿನಿ ಮೇಲೆ ಅವ್ಯವಹಾರದ ಆರೋಪ ಹೊರಿಸಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದೇ ಸಂದರ್ಭದಲ್ಲಿ ಕೆಲವು ಬೋಗಸ್ ಬಿಲ್ಗೆ ಸಹಿ ಮಾಡಲು ಒತ್ತಾಯಿಸಿ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಸಂಬಂಧಿ ಸೂರ್ಯಕಾಂತ ನಿಂಬಾಳ್ಕರ್ ತಿಳಿಸಿದ್ದಾರೆ.