<p><strong>ಮೈಸೂರು: </strong>ನಾಡಿನ ವಿವಿಧ ಮೂಲೆಗಳಿಂದ ಬಂದಿದ್ದ ಸ್ತಬ್ಧಚಿತ್ರಗಳು ದಸರಾ ಮಹೋತ್ಸವದ ಬಂಬೂಸವಾರಿಯ ಮೆರುಗನ್ನು ಇಮ್ಮಡಿಗೊಳಿಸಿದವು. ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಸಾಗಿದ ಇವು ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದವು.<br /> <br /> ರಾಜ್ಯದ 29 ಜಿಲ್ಲಾ ಪಂಚಾಯಿತಿ, 6 ಇಲಾಖೆ, 6 ನಿಗಮ, ತೆಲಂಗಾಣ ಮತ್ತು ಪಾಂಡಿಚೇರಿ ಸೇರಿದಂತೆ ಒಟ್ಟು 44 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಕಲೆ ಸಂಸ್ಕೃತಿಯನ್ನು ಬಿಂಬಿಸುವ, ಪ್ರಾದೇಶಿಕ ವಿಶೇಷತೆಯನ್ನು ಪ್ರತಿನಿಧಿಸುವ ಪ್ರಯತ್ನ ಅನನ್ಯವಾಗಿತ್ತು.<br /> <br /> ಕನ್ನಡ ಸಾಹಿತ್ಯ, ಸಂಸ್ಕೃತಿಯ ವೈಭವ ಹೆಚ್ಚಿಸಿದ ಸಾಹಿತಿ, ಕಲಾವಿದರನ್ನು ಸ್ಮರಿಸಲಾಯಿತು. ಪ್ರಮುಖ ಪ್ರವಾಸಿ ತಾಣಗಳು, ವಾಸ್ತುಶಿಲ್ಪ ಕಲೆಯ ದೇಗುಲಗಳು ಸ್ತಬ್ಧಚಿತ್ರಕ್ಕೆ ವಸ್ತುವಾಗಿದ್ದವು. ಜಿಲ್ಲಾ ಪಂಚಾಯಿತಿಗಳು ನಿರ್ಮಿಸಿದ ಸ್ತಬ್ಧಚಿತ್ರವನ್ನು ಪ್ರಾದೇಶಿಕವಾರು ವಿಂಗಡಿಸಿ ಬಹುಮಾನ ನೀಡಲಾಗಿದೆ. ಪ್ರಥಮ ಸ್ಥಾನ ಪಡೆದ ಸ್ತಬ್ಧಚಿತ್ರಕ್ಕೆ ₨ 10 ಸಾವಿರ, ಸಮಾಧಾನಕರ ಸ್ಥಾನ ಪಡೆದ ಸ್ತಬ್ಧಚಿತ್ರಕ್ಕೆ ₨ 5 ಸಾವಿರ ಬಹುಮಾನ ನೀಡಲಾಯಿತು.<br /> <br /> <strong>ವಿಜೇತ ಸ್ತಬ್ಧಚಿತ್ರ ಪಟ್ಟಿ ಹೊರ ರಾಜ್ಯ ವಿಭಾಗ</strong></p>.<p>ತೆಲಂಗಾಣ (ಪ್ರಥಮ), ಪಾಂಡಿಚೇರಿ (ಸಮಾಧಾನಕರ)<br /> ಇಲಾಖೆ, ನಿಗಮ ಮಂಡಳಿ ವಿಭಾಗ<br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಪ್ರಥಮ), ಪ್ರವಾಸೋದ್ಯಮ (ಸಮಾಧಾನಕರ)<br /> ಬೆಂಗಳೂರು ವಿಭಾಗ<br /> ತುಮಕೂರು (ಪ್ರಥಮ), ಶಿವಮೊಗ್ಗ (ಸಮಾಧಾನಕರ)<br /> ಮೈಸೂರು ವಿಭಾಗ<br /> ಮೈಸೂರು (ಪ್ರಥಮ), ಹಾಸನ (ಸಮಾಧಾನಕರ)<br /> ಗುಲ್ಬರ್ಗ ವಿಭಾಗ<br /> ಬಳ್ಳಾರಿ (ಪ್ರಥಮ), ಕೊಪ್ಪಳ (ಸಮಾಧಾನಕರ)<br /> ಬೆಳಗಾವಿ<br /> ಗದಗ (ಪ್ರಥಮ), ಬಾಗಲಕೋಟೆ (ಸಮಾಧಾನಕರ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ನಾಡಿನ ವಿವಿಧ ಮೂಲೆಗಳಿಂದ ಬಂದಿದ್ದ ಸ್ತಬ್ಧಚಿತ್ರಗಳು ದಸರಾ ಮಹೋತ್ಸವದ ಬಂಬೂಸವಾರಿಯ ಮೆರುಗನ್ನು ಇಮ್ಮಡಿಗೊಳಿಸಿದವು. ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಸಾಗಿದ ಇವು ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದವು.<br /> <br /> ರಾಜ್ಯದ 29 ಜಿಲ್ಲಾ ಪಂಚಾಯಿತಿ, 6 ಇಲಾಖೆ, 6 ನಿಗಮ, ತೆಲಂಗಾಣ ಮತ್ತು ಪಾಂಡಿಚೇರಿ ಸೇರಿದಂತೆ ಒಟ್ಟು 44 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಕಲೆ ಸಂಸ್ಕೃತಿಯನ್ನು ಬಿಂಬಿಸುವ, ಪ್ರಾದೇಶಿಕ ವಿಶೇಷತೆಯನ್ನು ಪ್ರತಿನಿಧಿಸುವ ಪ್ರಯತ್ನ ಅನನ್ಯವಾಗಿತ್ತು.<br /> <br /> ಕನ್ನಡ ಸಾಹಿತ್ಯ, ಸಂಸ್ಕೃತಿಯ ವೈಭವ ಹೆಚ್ಚಿಸಿದ ಸಾಹಿತಿ, ಕಲಾವಿದರನ್ನು ಸ್ಮರಿಸಲಾಯಿತು. ಪ್ರಮುಖ ಪ್ರವಾಸಿ ತಾಣಗಳು, ವಾಸ್ತುಶಿಲ್ಪ ಕಲೆಯ ದೇಗುಲಗಳು ಸ್ತಬ್ಧಚಿತ್ರಕ್ಕೆ ವಸ್ತುವಾಗಿದ್ದವು. ಜಿಲ್ಲಾ ಪಂಚಾಯಿತಿಗಳು ನಿರ್ಮಿಸಿದ ಸ್ತಬ್ಧಚಿತ್ರವನ್ನು ಪ್ರಾದೇಶಿಕವಾರು ವಿಂಗಡಿಸಿ ಬಹುಮಾನ ನೀಡಲಾಗಿದೆ. ಪ್ರಥಮ ಸ್ಥಾನ ಪಡೆದ ಸ್ತಬ್ಧಚಿತ್ರಕ್ಕೆ ₨ 10 ಸಾವಿರ, ಸಮಾಧಾನಕರ ಸ್ಥಾನ ಪಡೆದ ಸ್ತಬ್ಧಚಿತ್ರಕ್ಕೆ ₨ 5 ಸಾವಿರ ಬಹುಮಾನ ನೀಡಲಾಯಿತು.<br /> <br /> <strong>ವಿಜೇತ ಸ್ತಬ್ಧಚಿತ್ರ ಪಟ್ಟಿ ಹೊರ ರಾಜ್ಯ ವಿಭಾಗ</strong></p>.<p>ತೆಲಂಗಾಣ (ಪ್ರಥಮ), ಪಾಂಡಿಚೇರಿ (ಸಮಾಧಾನಕರ)<br /> ಇಲಾಖೆ, ನಿಗಮ ಮಂಡಳಿ ವಿಭಾಗ<br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಪ್ರಥಮ), ಪ್ರವಾಸೋದ್ಯಮ (ಸಮಾಧಾನಕರ)<br /> ಬೆಂಗಳೂರು ವಿಭಾಗ<br /> ತುಮಕೂರು (ಪ್ರಥಮ), ಶಿವಮೊಗ್ಗ (ಸಮಾಧಾನಕರ)<br /> ಮೈಸೂರು ವಿಭಾಗ<br /> ಮೈಸೂರು (ಪ್ರಥಮ), ಹಾಸನ (ಸಮಾಧಾನಕರ)<br /> ಗುಲ್ಬರ್ಗ ವಿಭಾಗ<br /> ಬಳ್ಳಾರಿ (ಪ್ರಥಮ), ಕೊಪ್ಪಳ (ಸಮಾಧಾನಕರ)<br /> ಬೆಳಗಾವಿ<br /> ಗದಗ (ಪ್ರಥಮ), ಬಾಗಲಕೋಟೆ (ಸಮಾಧಾನಕರ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>