<p><strong>ಶಿರಸಿ (ಉತ್ತರ ಕನ್ನಡ):</strong> ಹಿರಿಯ ರಂಗಕರ್ಮಿ ಕೆ.ವಿ. ಅಕ್ಷರ ಅವರಿಗೆ ವಿಮರ್ಶಕ ಟಿ.ಪಿ. ಅಶೋಕ ಅವರು ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದರು.<br /> <br /> ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯು ರಜತ ವರ್ಷಾಚರಣೆಯ ಸಂದರ್ಭದಲ್ಲಿ ಬಿಎಚ್ಶ್ರೀ ಅವರ ಜನ್ಮದಿನವಾದ ಶುಕ್ರವಾರ (ಇದೇ 24) ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.<br /> <br /> ‘ಸಾಹಿತ್ಯ ಕ್ಷೇತ್ರದಲ್ಲಿ ಪೂರ್ವ ತನ್ನೊಳಗಿನ ಪಶ್ಚಿಮವನ್ನು ಹಾಗೂ ಪಶ್ಚಿಮ ತನ್ನೊಳಗಿನ ಪೂರ್ವವನ್ನು ಕಂಡುಕೊಂಡರೆ ಇವೆರಡಕ್ಕೂ ನೆಲೆ ಸಿಗಲು ಸಾಧ್ಯವಾಗುತ್ತದೆ’ ಎಂದು ಪ್ರಶಸ್ತಿ ಸ್ವೀಕರಿಸಿದ ಕೆ.ವಿ. ಅಕ್ಷರ ಹೇಳಿದರು.<br /> <br /> ವಿಮರ್ಶಕ ಆರ್.ಡಿ. ಹೆಗಡೆ, ಪ್ರೊ. ಎಚ್.ಆರ್. ಅಮರನಾಥ ಅವರು ಶ್ರೀಧರ ಕುರಿತು ಮಾತನಾಡಿದರು. ಪ್ರೊ. ಎಂ.ಜಿ. ಹೆಗಡೆ ಅವರು ಅಕ್ಷರರ ಕೃತಿ ಕುರಿತು ಮಾತನಾಡಿದರು. ಲೋಹಿತ್ ಮಹಾಲೆ ಅವರಿಗೆ ಬಿಎಚ್ಶ್ರೀ ಶಿಕ್ಷಣ ಪುರಸ್ಕಾರ ನೀಡಿ ಗೌರವಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ (ಉತ್ತರ ಕನ್ನಡ):</strong> ಹಿರಿಯ ರಂಗಕರ್ಮಿ ಕೆ.ವಿ. ಅಕ್ಷರ ಅವರಿಗೆ ವಿಮರ್ಶಕ ಟಿ.ಪಿ. ಅಶೋಕ ಅವರು ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದರು.<br /> <br /> ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯು ರಜತ ವರ್ಷಾಚರಣೆಯ ಸಂದರ್ಭದಲ್ಲಿ ಬಿಎಚ್ಶ್ರೀ ಅವರ ಜನ್ಮದಿನವಾದ ಶುಕ್ರವಾರ (ಇದೇ 24) ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.<br /> <br /> ‘ಸಾಹಿತ್ಯ ಕ್ಷೇತ್ರದಲ್ಲಿ ಪೂರ್ವ ತನ್ನೊಳಗಿನ ಪಶ್ಚಿಮವನ್ನು ಹಾಗೂ ಪಶ್ಚಿಮ ತನ್ನೊಳಗಿನ ಪೂರ್ವವನ್ನು ಕಂಡುಕೊಂಡರೆ ಇವೆರಡಕ್ಕೂ ನೆಲೆ ಸಿಗಲು ಸಾಧ್ಯವಾಗುತ್ತದೆ’ ಎಂದು ಪ್ರಶಸ್ತಿ ಸ್ವೀಕರಿಸಿದ ಕೆ.ವಿ. ಅಕ್ಷರ ಹೇಳಿದರು.<br /> <br /> ವಿಮರ್ಶಕ ಆರ್.ಡಿ. ಹೆಗಡೆ, ಪ್ರೊ. ಎಚ್.ಆರ್. ಅಮರನಾಥ ಅವರು ಶ್ರೀಧರ ಕುರಿತು ಮಾತನಾಡಿದರು. ಪ್ರೊ. ಎಂ.ಜಿ. ಹೆಗಡೆ ಅವರು ಅಕ್ಷರರ ಕೃತಿ ಕುರಿತು ಮಾತನಾಡಿದರು. ಲೋಹಿತ್ ಮಹಾಲೆ ಅವರಿಗೆ ಬಿಎಚ್ಶ್ರೀ ಶಿಕ್ಷಣ ಪುರಸ್ಕಾರ ನೀಡಿ ಗೌರವಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>