ಇದಕ್ಕೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ದೊರೆಯದಿದ್ದಾಗ, ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಕೂಡ ಪ್ರತಿಭಟನೆ ನಡೆಸಿದರು.
‘ಇಪ್ಪತ್ತೈದು ವರ್ಷಗಳಿಂದ ಬೈನಾ ತೀರದಲ್ಲಿ ವಾಸಿಸುತ್ತಿದ್ದೇವೆ. ಈಗ ಏಕಾಏಕಿ ಮನೆ ತೆರವುಗೊಳಿಸಿದರೆ, ಹೆಂಡತಿ ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕು. ಗೋವಾ ಸರ್ಕಾರ ಶಾಶ್ವತ ಪುನರ್ವಸತಿ ಕಲ್ಪಿಸಿದ ನಂತರವೇ ಮನೆ ತೆರವುಗೊಳಿಸಲಿ’ ಎಂದು ಕನ್ನಡಿಗರು ಆಗ್ರಹಿಸಿದರು.
‘ಜಿಲ್ಲಾಧಿಕಾರಿ ಭೇಟಿ ನೀಡುವವರೆಗೂ ಕದಲುವುದಿಲ್ಲ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಆದರೆ, ಸಂಜೆಯಾದರೂ
ಯಾರೊಬ್ಬರೂ ಸಮಸ್ಯೆ ಆಲಿಸಲು ಬರಲಿಲ್ಲ.