'ಮಡಿಕೇರಿಯಿಂದ ಮಾರ್ಚ್ 3 ರಂದು ಹೊರಟ ಯಾತ್ರೆಯಲ್ಲಿ ದನ ಕಳ್ಳಸಾಗಾಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬೆಂಬಲ ನೀಡುತ್ತಿರುವ ದುಸ್ಥಿತಿಯನ್ನು ಬಿಂಬಿಸುವ ಟ್ಯಾಬ್ಲೊ ಇತ್ತು. ಸುಳ್ಯ ಪ್ರವೇಶಿಸುತ್ತಲೇ ಅದನ್ನು ವಿನಾ ಕಾರಣ ವಶಪಡಿಸಿಕೊಳ್ಳಲಾಯಿತು. ಜನ ಸುರಕ್ಷಾ ಯಾತ್ರೆಯ ಮೂಲಕ ಜನರಿಗೆ ವಾಸ್ತವ ದರ್ಶನ ಆಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಆತಂಕ ಶುರುವಾಗಿದೆ. ಆದ್ದರಿಂದಲೇ ಇಂತಹ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.