<p><strong>ದಾವಣಗೆರೆ:</strong> `ಮದ್ಯಪಾನ ನಿಷೇಧ ಕಷ್ಟಸಾಧ್ಯ. ಆದರೆ, ಈ ಬಗ್ಗೆ ಚಿಂತನೆ ನಡೆಸಲಾಗುವುದು'ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.<br /> <br /> `ಶಾಮನೂರು ಶಿವಶಂಕರಪ್ಪ ಅಭಿಮಾನಿಗಳ ಬಳಗ'ವು ನಗರದ ಮದಕರಿ ನಾಯಕ ವೃತ್ತದಲ್ಲಿ ಭಾನುವಾರ ಆಯೋಜಿಸಿದ್ದ ತೋಟಗಾರಿಕೆ ಮತ್ತು ಎಪಿಎಂಸಿ ಸಚಿವ ಶಾಮನೂರು ಶಿವಶಂಕರಪ್ಪನವರ ಹುಟ್ಟುಹಬ್ಬ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<table align="right" border="1" cellpadding="1" cellspacing="1" style="width: 500px;"> <tbody> <tr> <td> <p><strong>ಎಸ್ಎಸ್ಗೆ ಶಹಬ್ಬಾಷ್ಗಿರಿ</strong><br /> ಶಾಮನೂರು ಶಿವಶಂಕರಪ್ಪ ಶಾಸಕರಾಗಿದ್ದಾಗ ವಿಧಾನಸಭೆಗೆ ಬರುವುದೇ ಕಡಿಮೆಯಾಗಿತ್ತು. ಅವರಿಗೆ ವಯಸ್ಸಾಗಿದೆ; ಸಚಿವರಾದರೆ ಏನು ಮಾಡುತ್ತಾರೋ ಎಂಬ ಅನುಮಾನ ಇತ್ತು.</p> <p>83 ವರ್ಷದ ಅವರು, ಸಚಿವರಾದ ನಂತರ ಮತ್ತಷ್ಟು ಚುರುಕಾಗಿದ್ದಾರೆ. ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ತಮಾಷೆಯ ಮಾತಲ್ಲ.</p> <p>ಇದು ಅನುಭವದಿಂದ ಸಾಧ್ಯವಾಗಿದೆ. ಅವರೊಬ್ಬ ದೂರದೃಷ್ಟಿಯ ನಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಹಬ್ಬಾಷ್ಗಿರಿ ನೀಡಿದರು.</p> </td> </tr> </tbody> </table>.<p>ಮದ್ಯಪಾನ ನಿಷೇಧಿಸಬೇಕು ಎಂಬ ಸಭಿಕರ ಕೋರಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, `ನಾನು ಅಬಕಾರಿ ಸಚಿವನಾಗಿದ್ದಾಗ ಉಪ ಸಮಿತಿ ಅಧ್ಯಕ್ಷನಾಗಿ ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದೆ.</p>.<p>ಒಂದು ರಾಜ್ಯದಲ್ಲಿ ನಿಷೇಧ ಮಾಡಿ, ಮತ್ತೊಂದು ರಾಜ್ಯದಲ್ಲಿ ಮದ್ಯ ದೊರೆತರೆ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಕೊಟ್ಟಂತಾಗುತ್ತದೆ. ಮಾಡಿದರೆ, ದೇಶಾದ್ಯಂತ ನಿಷೇಧಿಸಬೇಕು' ಎಂದು ಹೇಳಿದರು.<br /> <br /> `ಮಹಾತ್ಮ ಗಾಂಧೀಜಿ ತವರಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿಯಾಗಿದೆ. ಆದರೆ, ಅದು ಆದೇಶದ್ಲ್ಲಲಷ್ಟೇ ಉಳಿದಿದೆ. ಸಾರಾಯಿ ನಿಷೇಧಿಸಲಾಗಿದೆ. ಸರಿ, ಸಾರಾಯಿ ಕುಡಿಯುತ್ತಿದ್ದವರು ವಿಸ್ಕಿ ಕುಡಿಯುವುದು ನಿಲ್ಲಿಸಿದ್ದಾರೆಯೇ? ಈ ಬಗ್ಗೆ ವಿಚಾರ ಮಾಡೋಣ.</p>.<p>ಬೇಜವಾಬ್ದಾರಿಯಿಂದ ಏನನ್ನೂ ಮಾತನಾಡಬಾರದು. ಆಗುವುದಾದರೆ ಭರವಸೆ ನೀಡಬೇಕು. ಮದ್ಯಪಾನ ನಿಷೇಧ ಕಷ್ಟ' ಎಂದು ಪುನರುಚ್ಚರಿಸಿದರು.<br /> <br /> `ಹಾಗೆಂದು ನಾನು ಮದ್ಯಪಾನಿಗಳ ಪರ ಇದ್ದೇನೆ ಎಂದರ್ಥವಲ್ಲ. ಮದ್ಯಪಾನ ಒಳ್ಳೆಯದಲ್ಲ. ಮದ್ಯಪಾನ ಮಾಡಬಾರದು; ಮಾಡುತ್ತಿದ್ದರೆ ಬಿಟ್ಟುಬಿಡಿ' ಎಂದು ಸಲಹೆ ನೀಡಿದರು.<br /> <br /> `ಸರಳವಾಗಿ ಮದುವೆಯಾಗುವುದು ಇಂದಿನ ಅಗತ್ಯ. ಹೀಗಾಗಿ, ಶ್ರೀಮಂತರ ಅದ್ದೂರಿ ಮದುವೆಗೆ ಹಾಗೂ ಸಂಪತ್ತು ಪ್ರದರ್ಶನ ಮಾಡುವುದಕ್ಕೆ ಕಡಿವಾಣ ಹಾಕಲು ಚಿಂತನೆ ನಡೆಸಿದ್ದೇನೆ' ಎಂದು ತಿಳಿಸಿದರು.<br /> <br /> ಬಿಜೆಪಿ ವಿರುದ್ಧ ಟೀಕೆ: `ಆರೋಗ್ಯಕ್ಕೆ ಹಾನಿಕಾರಿಯಾದ ಗುಟ್ಕಾವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನಿಷೇಧಿಸಲಾಗಿದೆ. ಇದನ್ನು ವಿಶೇಷವಾಗಿ ಬಿಜೆಪಿಯವರು ವಿರೋಧಿಸಿದರು. ರಾಜಕೀಯಕ್ಕೋಸ್ಕರ ವಿರೋಧಿಸುತ್ತಿರುವ ಅವರು, ಗುಟ್ಕಾ ಲಾಬಿಗೆ ಒಳಗಾದವರು ಎಂದು' ಸಿದ್ದರಾಮಯ್ಯ ಟೀಕಿಸಿದರು.<br /> <br /> `ಗುಟ್ಕಾ ಸಿದ್ಧಪಡಿಸಲು ನಮ್ಮ ಬೆಳೆಗಾರರು ಬೆಳೆಯುವ ಅಡಿಕೆ ಬಳಕೆಯಾಗುತ್ತಿರಲಿಲ್ಲ. ಬೇರೆ ದೇಶದಿಂದ ಬರುವ ಕಳಪೆ ಅಡಿಕೆ ಉಪಯೋಗಿಸುತ್ತಿದ್ದರು. ಜನರ ಆರೋಗ್ಯ ರಕ್ಷಣೆಗೆ ಗುಟ್ಕಾ ನಿಷೇಧಿಸಿದ್ದೇವೆ' ಎಂದು ಸಮರ್ಥಿಸಿಕೊಂಡರು. `ಸರ್ಕಾರ ಬೆಳೆಗಾರರ ಜತೆಗಿರುತ್ತದೆ. ಅವರು ಆತಂಕ ಪಡುವುದು ಬೇಡ' ಎಂದೂ ಭರವಸೆ ನೀಡಿದರು.<br /> <br /> ಲೀಟರ್ ಹಾಲಿಗೆ ರೈತರಿಗೆ ಸಹಾಯಧನವಾಗಿ ರೂ4 ಪ್ರೋತ್ಸಾಹಧನ ನೀಡಿದ್ದರಿಂದ, ಪ್ರತಿ ದಿನ 56 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಾಗಿದೆ. ಕರ್ನಾಟಕ ಹಾಲು ಮಹಾಮಂಡಳದಿಂದ ಅಷ್ಟೂ ಹಾಲನ್ನು ಮಾರಾಟ ಮಾಡಲು ಅಥವಾ ಪೌಡರ್ ಮಾಡಲು ಸಾಧ್ಯವಾಗುತ್ತಿಲ್ಲ.</p>.<p>ಹೀಗಾಗಿ, ಹೆಚ್ಚುವರಿ ಹಾಲನ್ನು (9ಲಕ್ಷ ಲೀಟರ್) ಕೊಂಡು 1ರಿಂದ 10ನೇ ತರಗತಿಯ ಎಲ್ಲ ಮಕ್ಕಳಿಗೆ ತಲಾ 150 ಗ್ರಾಂನಂತೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> `ಮದ್ಯಪಾನ ನಿಷೇಧ ಕಷ್ಟಸಾಧ್ಯ. ಆದರೆ, ಈ ಬಗ್ಗೆ ಚಿಂತನೆ ನಡೆಸಲಾಗುವುದು'ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.<br /> <br /> `ಶಾಮನೂರು ಶಿವಶಂಕರಪ್ಪ ಅಭಿಮಾನಿಗಳ ಬಳಗ'ವು ನಗರದ ಮದಕರಿ ನಾಯಕ ವೃತ್ತದಲ್ಲಿ ಭಾನುವಾರ ಆಯೋಜಿಸಿದ್ದ ತೋಟಗಾರಿಕೆ ಮತ್ತು ಎಪಿಎಂಸಿ ಸಚಿವ ಶಾಮನೂರು ಶಿವಶಂಕರಪ್ಪನವರ ಹುಟ್ಟುಹಬ್ಬ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<table align="right" border="1" cellpadding="1" cellspacing="1" style="width: 500px;"> <tbody> <tr> <td> <p><strong>ಎಸ್ಎಸ್ಗೆ ಶಹಬ್ಬಾಷ್ಗಿರಿ</strong><br /> ಶಾಮನೂರು ಶಿವಶಂಕರಪ್ಪ ಶಾಸಕರಾಗಿದ್ದಾಗ ವಿಧಾನಸಭೆಗೆ ಬರುವುದೇ ಕಡಿಮೆಯಾಗಿತ್ತು. ಅವರಿಗೆ ವಯಸ್ಸಾಗಿದೆ; ಸಚಿವರಾದರೆ ಏನು ಮಾಡುತ್ತಾರೋ ಎಂಬ ಅನುಮಾನ ಇತ್ತು.</p> <p>83 ವರ್ಷದ ಅವರು, ಸಚಿವರಾದ ನಂತರ ಮತ್ತಷ್ಟು ಚುರುಕಾಗಿದ್ದಾರೆ. ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ತಮಾಷೆಯ ಮಾತಲ್ಲ.</p> <p>ಇದು ಅನುಭವದಿಂದ ಸಾಧ್ಯವಾಗಿದೆ. ಅವರೊಬ್ಬ ದೂರದೃಷ್ಟಿಯ ನಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಹಬ್ಬಾಷ್ಗಿರಿ ನೀಡಿದರು.</p> </td> </tr> </tbody> </table>.<p>ಮದ್ಯಪಾನ ನಿಷೇಧಿಸಬೇಕು ಎಂಬ ಸಭಿಕರ ಕೋರಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, `ನಾನು ಅಬಕಾರಿ ಸಚಿವನಾಗಿದ್ದಾಗ ಉಪ ಸಮಿತಿ ಅಧ್ಯಕ್ಷನಾಗಿ ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದೆ.</p>.<p>ಒಂದು ರಾಜ್ಯದಲ್ಲಿ ನಿಷೇಧ ಮಾಡಿ, ಮತ್ತೊಂದು ರಾಜ್ಯದಲ್ಲಿ ಮದ್ಯ ದೊರೆತರೆ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಕೊಟ್ಟಂತಾಗುತ್ತದೆ. ಮಾಡಿದರೆ, ದೇಶಾದ್ಯಂತ ನಿಷೇಧಿಸಬೇಕು' ಎಂದು ಹೇಳಿದರು.<br /> <br /> `ಮಹಾತ್ಮ ಗಾಂಧೀಜಿ ತವರಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿಯಾಗಿದೆ. ಆದರೆ, ಅದು ಆದೇಶದ್ಲ್ಲಲಷ್ಟೇ ಉಳಿದಿದೆ. ಸಾರಾಯಿ ನಿಷೇಧಿಸಲಾಗಿದೆ. ಸರಿ, ಸಾರಾಯಿ ಕುಡಿಯುತ್ತಿದ್ದವರು ವಿಸ್ಕಿ ಕುಡಿಯುವುದು ನಿಲ್ಲಿಸಿದ್ದಾರೆಯೇ? ಈ ಬಗ್ಗೆ ವಿಚಾರ ಮಾಡೋಣ.</p>.<p>ಬೇಜವಾಬ್ದಾರಿಯಿಂದ ಏನನ್ನೂ ಮಾತನಾಡಬಾರದು. ಆಗುವುದಾದರೆ ಭರವಸೆ ನೀಡಬೇಕು. ಮದ್ಯಪಾನ ನಿಷೇಧ ಕಷ್ಟ' ಎಂದು ಪುನರುಚ್ಚರಿಸಿದರು.<br /> <br /> `ಹಾಗೆಂದು ನಾನು ಮದ್ಯಪಾನಿಗಳ ಪರ ಇದ್ದೇನೆ ಎಂದರ್ಥವಲ್ಲ. ಮದ್ಯಪಾನ ಒಳ್ಳೆಯದಲ್ಲ. ಮದ್ಯಪಾನ ಮಾಡಬಾರದು; ಮಾಡುತ್ತಿದ್ದರೆ ಬಿಟ್ಟುಬಿಡಿ' ಎಂದು ಸಲಹೆ ನೀಡಿದರು.<br /> <br /> `ಸರಳವಾಗಿ ಮದುವೆಯಾಗುವುದು ಇಂದಿನ ಅಗತ್ಯ. ಹೀಗಾಗಿ, ಶ್ರೀಮಂತರ ಅದ್ದೂರಿ ಮದುವೆಗೆ ಹಾಗೂ ಸಂಪತ್ತು ಪ್ರದರ್ಶನ ಮಾಡುವುದಕ್ಕೆ ಕಡಿವಾಣ ಹಾಕಲು ಚಿಂತನೆ ನಡೆಸಿದ್ದೇನೆ' ಎಂದು ತಿಳಿಸಿದರು.<br /> <br /> ಬಿಜೆಪಿ ವಿರುದ್ಧ ಟೀಕೆ: `ಆರೋಗ್ಯಕ್ಕೆ ಹಾನಿಕಾರಿಯಾದ ಗುಟ್ಕಾವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನಿಷೇಧಿಸಲಾಗಿದೆ. ಇದನ್ನು ವಿಶೇಷವಾಗಿ ಬಿಜೆಪಿಯವರು ವಿರೋಧಿಸಿದರು. ರಾಜಕೀಯಕ್ಕೋಸ್ಕರ ವಿರೋಧಿಸುತ್ತಿರುವ ಅವರು, ಗುಟ್ಕಾ ಲಾಬಿಗೆ ಒಳಗಾದವರು ಎಂದು' ಸಿದ್ದರಾಮಯ್ಯ ಟೀಕಿಸಿದರು.<br /> <br /> `ಗುಟ್ಕಾ ಸಿದ್ಧಪಡಿಸಲು ನಮ್ಮ ಬೆಳೆಗಾರರು ಬೆಳೆಯುವ ಅಡಿಕೆ ಬಳಕೆಯಾಗುತ್ತಿರಲಿಲ್ಲ. ಬೇರೆ ದೇಶದಿಂದ ಬರುವ ಕಳಪೆ ಅಡಿಕೆ ಉಪಯೋಗಿಸುತ್ತಿದ್ದರು. ಜನರ ಆರೋಗ್ಯ ರಕ್ಷಣೆಗೆ ಗುಟ್ಕಾ ನಿಷೇಧಿಸಿದ್ದೇವೆ' ಎಂದು ಸಮರ್ಥಿಸಿಕೊಂಡರು. `ಸರ್ಕಾರ ಬೆಳೆಗಾರರ ಜತೆಗಿರುತ್ತದೆ. ಅವರು ಆತಂಕ ಪಡುವುದು ಬೇಡ' ಎಂದೂ ಭರವಸೆ ನೀಡಿದರು.<br /> <br /> ಲೀಟರ್ ಹಾಲಿಗೆ ರೈತರಿಗೆ ಸಹಾಯಧನವಾಗಿ ರೂ4 ಪ್ರೋತ್ಸಾಹಧನ ನೀಡಿದ್ದರಿಂದ, ಪ್ರತಿ ದಿನ 56 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಾಗಿದೆ. ಕರ್ನಾಟಕ ಹಾಲು ಮಹಾಮಂಡಳದಿಂದ ಅಷ್ಟೂ ಹಾಲನ್ನು ಮಾರಾಟ ಮಾಡಲು ಅಥವಾ ಪೌಡರ್ ಮಾಡಲು ಸಾಧ್ಯವಾಗುತ್ತಿಲ್ಲ.</p>.<p>ಹೀಗಾಗಿ, ಹೆಚ್ಚುವರಿ ಹಾಲನ್ನು (9ಲಕ್ಷ ಲೀಟರ್) ಕೊಂಡು 1ರಿಂದ 10ನೇ ತರಗತಿಯ ಎಲ್ಲ ಮಕ್ಕಳಿಗೆ ತಲಾ 150 ಗ್ರಾಂನಂತೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>