<p>ಭಾದ್ರಪದ ಕೃಷ್ಣ ಅಮಾವಾಸ್ಯೆ-ಭಾದ್ರಪದ ಬಹುಳ ಅಮಾವಾಸ್ಯೆಗೆ ಮಹಾಲಯ ಅಮಾವಾಸ್ಯೆ ಎಂದು ಹೆಸರು. ಇದು ಪಿತೃ ಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ.<br /> <br /> ನಮ್ಮ ಹಿಂದಿನ ಋಷಿ ಮುನಿಗಳು ಗೋತ್ರ-ಸೂತ್ರ ಪ್ರವರ್ತಕರು ಮತ್ತು ಸಂಸ್ಕತಿಯ ಸಂಸ್ಥಾಪಕರು. ಮನೆಯಲ್ಲೂ ನಮ್ಮ ಹಿರಿಯರಿಂದ ನಾವು ಈ ಭೂಮಿಗೆ ಬಂದಿದ್ದೇವೆ. ನಮ್ಮ ಬಾಳನ್ನು ರೂಪಿಸುವಲ್ಲಿ ನಮ್ಮ ಹಿರಿಯರು ಅಪಾರ ತ್ಯಾಗ ಮಾಡಿದ್ದಾರೆ. <br /> <br /> ನಮಗಾಗಿ ಅವರು ಅನೇಕ ಕಷ್ಟ ನಷ್ಟ ಅನುಭವಿಸಿ ಕೆಲವೊಮ್ಮೆ ಸಾಲ ಮಾಡಿ, ವಿದ್ಯೆ-ಬುದ್ಧಿ ಕಲಿಸಿ ನಮ್ಮನ್ನು ತಿದ್ದಿ ಬೆಳೆಸಿ, ನಮ್ಮ ಬಾಳು ಬಂಗಾರವಾಗುಂತೆ ಮಾಡಿದವರು. ಅವರು ಇಂದು ಸ್ಥೂಲ ಶರೀರದಿಂದ ಪ್ರತ್ಯಕ್ಷವಾಗಿ ನಮ್ಮ ಕಣ್ಮುಂದೆ ಇಲ್ಲವಾದರೂ ಸೂಕ್ಷ್ಮ ಶರೀರದಿಂದ ಪರೋಕ್ಷವಾಗಿ ನಮ್ಮ ಕರ್ತವ್ಯ ಕರ್ಮಗಳನ್ನು ವೀಕ್ಷಿಸುತ್ತಾ ಇರುತ್ತಾರೆ. <br /> <br /> ನಮ್ಮನ್ನಗಲಿದ ತಂದೆ-ತಾಯಿಯರನ್ನು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಸಹಕರಿಸಿ ನಮ್ಮನ್ನಗಲಿದ ಎಲ್ಲ ಆಪ್ತರನ್ನು ನಮ್ಮ ಜೀವನದಜಂಜಾಟದಲ್ಲಿ ನಿತ್ಯವೂ ಸ್ಮರಿಸಲು ಸಾಧ್ಯವಾಗುವುದಿಲ್ಲ. <br /> <br /> ಕೊನೆಯ ಪಕ್ಷ ವರ್ಷಕ್ಕೊಮ್ಮೆ ಪಿತೃ ಪಕ್ಷದಲ್ಲಿ ಅಥವಾ ಮಹಾಲಯ ಅಮಾವಾಸ್ಯೆಯಂದು ಅವರನ್ನು ಸ್ಮರಿಸಿ ತಿಲ ತರ್ಪಣವನ್ನು, ಜಲ ತರ್ಪಣವನ್ನು ಹಾಗೂ ಬಲಿಯನ್ನೋ, ಪಿಂಡದಾನವನ್ನೋ, ನೀಡಿ ಸ್ಮರಿಸಬೇಕು. ಇದು ಈ ಮಹಾಲಯ ಅಮಾವಾಸ್ಯೆಯ ವಿಶೇಷವಾಗಿದೆ.<br /> <br /> ಮಹಾಲಯ ಅಮಾವಾಸ್ಯೆಯ ಪೌರಾಣಿಕ ಹಿನ್ನೆಲೆಯೇನೆಂದರೆ, ಮಹಾಭಾರತದ ಬಹು ದೊಡ್ಡ ನಾಯಕರಲ್ಲಿ ಒಬ್ಬನಾದ ಕರ್ಣನು, ಯುದ್ಧದಲ್ಲಿ ಅರ್ಜುನನಿಂದ ಹತನಾದ ಮೇಲೆ ದೇವದೂತರು ಅವನನ್ನು ಸ್ವರ್ಗಕ್ಕೆ ಕರೆದು ಕೊಂಡು ಹೋಗುತ್ತಾರೆ. ಮಾರ್ಗಮಧ್ಯದಲ್ಲಿ ಕರ್ಣನಿಗೆ ತಿನ್ನಲು ಏನೂ ಸಿಗುವುದಿಲ್ಲ. <br /> <br /> ಅವನಿಗೆ ಎಲ್ಲೆಲ್ಲೂ ಬಂಗಾರ, ಬೆಳ್ಳಿ ಮುಂತಾದ ಒಡವೆಗಳು ಕಾಣುತ್ತವೆ. ಇದರಿಂದ ಅವನು ತೀವ್ರವಾಗಿ ಮನನೊಂದು, ಸಾವಿನ ದೇವತೆಯಾದ ಯಮನನ್ನು ಕುರಿತು ಭಕ್ತಿಯಿಂದ ಪ್ರಾರ್ಥಿಸುತ್ತಾನೆ. ಕರ್ಣನ ಪ್ರಾರ್ಥನೆಗೆ ಯಮನು ಪ್ರತ್ಯಕ್ಷನಾಗಿ ಭಾದ್ರಪದಮಾಸದ ಮಹಾಲಯ ಪಕ್ಷದ ದಿನಗಳಂದು ದಾನವನ್ನು ಮಾಡುವಂತೆ ಹೇಳುತ್ತಾನೆ. <br /> <br /> ಯಮನ ಆದೇಶದಂತೆ ಕರ್ಣನು ಮತ್ತೆ ಭೂಮಿಗೆ ಹಿಂತಿರುಗಿ ಭಾದ್ರಪದ ಮಾಸದ ಮಹಾಲಯ ಪಕ್ಷದ ದಿನಗಳಂದು ಯಥೇಚ್ಚವಾಗಿ ತನ್ನ ಹಿರಿಯರಿಗೆ, ಹಾಗು ಬಡವರಿಗೆ ಅನ್ನ ಹಾಗು ವಸ್ತ್ರದಾನವನ್ನು ಮಾಡುತ್ತಾನೆ. ಇದರಿಂದ ಸಂತುಷ್ಟರಾದ ಪಿತೃಗಳು ಅವನನ್ನು ಹರಸುತ್ತಾರೆ. <br /> <br /> ಅವರ ಆಶೀರ್ವಾದದಿಂದ ಕರ್ಣನು ಯಾವುದೇ ತೊಂದರೆಯಿಲ್ಲದೇ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಪುರಾಣಗಳಲ್ಲಿ ಹೇಳಿದೆ. ಹಿರಿಯರಿಗೆ ಮಾಡುವ ಈ ಕಾರ್ಯವನ್ನು ಸಾಮಾನ್ಯವಾಗಿ ಎಡೆ ಇಡುವ ಕಾರ್ಯವೆಂದು ಸವರ್ಣೀಯರೂ ಮಾಡುತ್ತಾರೆ. ಅಲ್ಲದೇ ಅವರ ಹಿರಿಯರಿಗೆ ಇಷ್ಟವಾದ ತಿಂಡಿ, ತಿನಿಸುಗಳನ್ನು ಬಟ್ಟೆ-ಬರೆಗಳನ್ನು ಅವರ ಭಾವಚಿತ್ರದ ಬಳಿ ಇಟ್ಟು ಪೂಜೆ ಮಾಡಿ ನಂತರ ಮನೆಯವರು ಪ್ರಸಾದದ ರೂಪದಲ್ಲಿ ಸೇವಿಸಿ ನಂತರ ಬಡವರಿಗೆ ಇವುಗಳನ್ನು ದಾನ ಮಾಡುವುದು ವಾಡಿಕೆಯಾಗಿದೆ.<br /> <br /> ಈ ಪಿತೃಪಕ್ಷದ ದಿನಗಳಂದು ಅಥವಾ ಮಹಾಲಯ ಅಮಾವಾಸ್ಯೆಯಂದು ನಮ್ಮಲ್ಲಿರುವುದರಲ್ಲಿ ಸ್ವಲ್ಪವನ್ನಾದರೂ ದಾನ ಮಾಡಿದರೆ ಪಿತೃಗಳು ಸಂತುಷ್ಟರಾಗಿ ನಮಗೆ ಇನ್ನೂ ಹೆಚ್ಚಿನ ಸುಖ ಸಂತೋಷಗಳನ್ನು ನೀಡುತ್ತಾರೆ ಎಂಬ ನಂಬಿಕೆಯಿದೆ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾದ್ರಪದ ಕೃಷ್ಣ ಅಮಾವಾಸ್ಯೆ-ಭಾದ್ರಪದ ಬಹುಳ ಅಮಾವಾಸ್ಯೆಗೆ ಮಹಾಲಯ ಅಮಾವಾಸ್ಯೆ ಎಂದು ಹೆಸರು. ಇದು ಪಿತೃ ಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ.<br /> <br /> ನಮ್ಮ ಹಿಂದಿನ ಋಷಿ ಮುನಿಗಳು ಗೋತ್ರ-ಸೂತ್ರ ಪ್ರವರ್ತಕರು ಮತ್ತು ಸಂಸ್ಕತಿಯ ಸಂಸ್ಥಾಪಕರು. ಮನೆಯಲ್ಲೂ ನಮ್ಮ ಹಿರಿಯರಿಂದ ನಾವು ಈ ಭೂಮಿಗೆ ಬಂದಿದ್ದೇವೆ. ನಮ್ಮ ಬಾಳನ್ನು ರೂಪಿಸುವಲ್ಲಿ ನಮ್ಮ ಹಿರಿಯರು ಅಪಾರ ತ್ಯಾಗ ಮಾಡಿದ್ದಾರೆ. <br /> <br /> ನಮಗಾಗಿ ಅವರು ಅನೇಕ ಕಷ್ಟ ನಷ್ಟ ಅನುಭವಿಸಿ ಕೆಲವೊಮ್ಮೆ ಸಾಲ ಮಾಡಿ, ವಿದ್ಯೆ-ಬುದ್ಧಿ ಕಲಿಸಿ ನಮ್ಮನ್ನು ತಿದ್ದಿ ಬೆಳೆಸಿ, ನಮ್ಮ ಬಾಳು ಬಂಗಾರವಾಗುಂತೆ ಮಾಡಿದವರು. ಅವರು ಇಂದು ಸ್ಥೂಲ ಶರೀರದಿಂದ ಪ್ರತ್ಯಕ್ಷವಾಗಿ ನಮ್ಮ ಕಣ್ಮುಂದೆ ಇಲ್ಲವಾದರೂ ಸೂಕ್ಷ್ಮ ಶರೀರದಿಂದ ಪರೋಕ್ಷವಾಗಿ ನಮ್ಮ ಕರ್ತವ್ಯ ಕರ್ಮಗಳನ್ನು ವೀಕ್ಷಿಸುತ್ತಾ ಇರುತ್ತಾರೆ. <br /> <br /> ನಮ್ಮನ್ನಗಲಿದ ತಂದೆ-ತಾಯಿಯರನ್ನು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಸಹಕರಿಸಿ ನಮ್ಮನ್ನಗಲಿದ ಎಲ್ಲ ಆಪ್ತರನ್ನು ನಮ್ಮ ಜೀವನದಜಂಜಾಟದಲ್ಲಿ ನಿತ್ಯವೂ ಸ್ಮರಿಸಲು ಸಾಧ್ಯವಾಗುವುದಿಲ್ಲ. <br /> <br /> ಕೊನೆಯ ಪಕ್ಷ ವರ್ಷಕ್ಕೊಮ್ಮೆ ಪಿತೃ ಪಕ್ಷದಲ್ಲಿ ಅಥವಾ ಮಹಾಲಯ ಅಮಾವಾಸ್ಯೆಯಂದು ಅವರನ್ನು ಸ್ಮರಿಸಿ ತಿಲ ತರ್ಪಣವನ್ನು, ಜಲ ತರ್ಪಣವನ್ನು ಹಾಗೂ ಬಲಿಯನ್ನೋ, ಪಿಂಡದಾನವನ್ನೋ, ನೀಡಿ ಸ್ಮರಿಸಬೇಕು. ಇದು ಈ ಮಹಾಲಯ ಅಮಾವಾಸ್ಯೆಯ ವಿಶೇಷವಾಗಿದೆ.<br /> <br /> ಮಹಾಲಯ ಅಮಾವಾಸ್ಯೆಯ ಪೌರಾಣಿಕ ಹಿನ್ನೆಲೆಯೇನೆಂದರೆ, ಮಹಾಭಾರತದ ಬಹು ದೊಡ್ಡ ನಾಯಕರಲ್ಲಿ ಒಬ್ಬನಾದ ಕರ್ಣನು, ಯುದ್ಧದಲ್ಲಿ ಅರ್ಜುನನಿಂದ ಹತನಾದ ಮೇಲೆ ದೇವದೂತರು ಅವನನ್ನು ಸ್ವರ್ಗಕ್ಕೆ ಕರೆದು ಕೊಂಡು ಹೋಗುತ್ತಾರೆ. ಮಾರ್ಗಮಧ್ಯದಲ್ಲಿ ಕರ್ಣನಿಗೆ ತಿನ್ನಲು ಏನೂ ಸಿಗುವುದಿಲ್ಲ. <br /> <br /> ಅವನಿಗೆ ಎಲ್ಲೆಲ್ಲೂ ಬಂಗಾರ, ಬೆಳ್ಳಿ ಮುಂತಾದ ಒಡವೆಗಳು ಕಾಣುತ್ತವೆ. ಇದರಿಂದ ಅವನು ತೀವ್ರವಾಗಿ ಮನನೊಂದು, ಸಾವಿನ ದೇವತೆಯಾದ ಯಮನನ್ನು ಕುರಿತು ಭಕ್ತಿಯಿಂದ ಪ್ರಾರ್ಥಿಸುತ್ತಾನೆ. ಕರ್ಣನ ಪ್ರಾರ್ಥನೆಗೆ ಯಮನು ಪ್ರತ್ಯಕ್ಷನಾಗಿ ಭಾದ್ರಪದಮಾಸದ ಮಹಾಲಯ ಪಕ್ಷದ ದಿನಗಳಂದು ದಾನವನ್ನು ಮಾಡುವಂತೆ ಹೇಳುತ್ತಾನೆ. <br /> <br /> ಯಮನ ಆದೇಶದಂತೆ ಕರ್ಣನು ಮತ್ತೆ ಭೂಮಿಗೆ ಹಿಂತಿರುಗಿ ಭಾದ್ರಪದ ಮಾಸದ ಮಹಾಲಯ ಪಕ್ಷದ ದಿನಗಳಂದು ಯಥೇಚ್ಚವಾಗಿ ತನ್ನ ಹಿರಿಯರಿಗೆ, ಹಾಗು ಬಡವರಿಗೆ ಅನ್ನ ಹಾಗು ವಸ್ತ್ರದಾನವನ್ನು ಮಾಡುತ್ತಾನೆ. ಇದರಿಂದ ಸಂತುಷ್ಟರಾದ ಪಿತೃಗಳು ಅವನನ್ನು ಹರಸುತ್ತಾರೆ. <br /> <br /> ಅವರ ಆಶೀರ್ವಾದದಿಂದ ಕರ್ಣನು ಯಾವುದೇ ತೊಂದರೆಯಿಲ್ಲದೇ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಪುರಾಣಗಳಲ್ಲಿ ಹೇಳಿದೆ. ಹಿರಿಯರಿಗೆ ಮಾಡುವ ಈ ಕಾರ್ಯವನ್ನು ಸಾಮಾನ್ಯವಾಗಿ ಎಡೆ ಇಡುವ ಕಾರ್ಯವೆಂದು ಸವರ್ಣೀಯರೂ ಮಾಡುತ್ತಾರೆ. ಅಲ್ಲದೇ ಅವರ ಹಿರಿಯರಿಗೆ ಇಷ್ಟವಾದ ತಿಂಡಿ, ತಿನಿಸುಗಳನ್ನು ಬಟ್ಟೆ-ಬರೆಗಳನ್ನು ಅವರ ಭಾವಚಿತ್ರದ ಬಳಿ ಇಟ್ಟು ಪೂಜೆ ಮಾಡಿ ನಂತರ ಮನೆಯವರು ಪ್ರಸಾದದ ರೂಪದಲ್ಲಿ ಸೇವಿಸಿ ನಂತರ ಬಡವರಿಗೆ ಇವುಗಳನ್ನು ದಾನ ಮಾಡುವುದು ವಾಡಿಕೆಯಾಗಿದೆ.<br /> <br /> ಈ ಪಿತೃಪಕ್ಷದ ದಿನಗಳಂದು ಅಥವಾ ಮಹಾಲಯ ಅಮಾವಾಸ್ಯೆಯಂದು ನಮ್ಮಲ್ಲಿರುವುದರಲ್ಲಿ ಸ್ವಲ್ಪವನ್ನಾದರೂ ದಾನ ಮಾಡಿದರೆ ಪಿತೃಗಳು ಸಂತುಷ್ಟರಾಗಿ ನಮಗೆ ಇನ್ನೂ ಹೆಚ್ಚಿನ ಸುಖ ಸಂತೋಷಗಳನ್ನು ನೀಡುತ್ತಾರೆ ಎಂಬ ನಂಬಿಕೆಯಿದೆ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>