ಈ ಕುರಿತು ಮಾಹಿತಿ ನೀಡಿದ ನಾಯಕ, ‘ಅರ್ಜಿ ವಿಚಾರಣೆ ಮಾರ್ಚ್ 28ರಂದು ನಡೆಯಲಿದೆ. ರಾಜ್ಯ ಸರ್ಕಾರ ಪ್ರಕರಣವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಕಮಲಾಕರ ಆರೋಪಿಸಿದ್ದಾರೆ. ಪ್ರಕರಣದ ಒಂದನೇ ಆರೋಪಿಯು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ. ಸರ್ಕಾರಿ ವಕೀಲರು ಕಮಲಾಕರ ಅವರು ದಾಖಲಿಸಿದ ದೂರಿನ ಪ್ರಥಮ ತನಿಖಾ ವರದಿಯನ್ನು ಆಧರವಾಗಿಟ್ಟುಕೊಂಡೇ ವಾದ ಮಂಡಿಸುತ್ತಿದ್ದಾರೆ. ಇದರಿಂದ ಆರೋಪಿಗೆ ಜಾಮೀನು ದೊರಕಿ, ನ್ಯಾಯ ಸಿಗದಿರಬಹುದು. ಹೀಗಾಗಿ ವಕೀಲರನ್ನು ನೇಮಿಸಿಕೊಳ್ಳಲು ಬಯಸಿದ್ದಾರೆ’ ಎಂದರು.