ಕರ್ಜನ್ ಪಾರ್ಕ್ನಲ್ಲಿ ನೂರಾರು ಜಾತಿಯ ಹೂವುಗಳು, ಹಣ್ಣು ತರಕಾರಿಗಳು ಮನಸೂರೆಗೊಳ್ಳುತ್ತಿವೆ. 25 ಸಾವಿರ ಗುಲಾಬಿ ಹೂವುಗಳನ್ನು ಬಳಸಿ ಚಾಮರಾಜ ವೃತ್ತದ ಪ್ರತಿಕೃತಿಯನ್ನು ನಿರ್ಮಿಸಲಾಗಿದ್ದು ಈ ಬಾರಿಯ ವಿಶೇಷವಾಗಿದೆ. ಇದೇ ಮೊದಲ ಬಾರಿಗೆ ಕಲಾವಿದೆ ಗೌರಿ ಮರಳಿನಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ರೂಪಿಸಿದ್ದಾರೆ.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕ್ರೀಡಾಕೂಟ, ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ ಮುಕ್ತಾಯಗೊಂಡಿತು. ಇಷ್ಟೇ ಅಲ್ಲದೆ ಜಗನ್ಮೋಹನ ಅರಮನೆ, ಗಾನ ಭಾರತೀ, ನಾದಬ್ರಹ್ಮ ಸಂಗೀತ ಸಭಾದಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆದವು.