<p><strong>ಶಿರಸಿ: </strong>160 ಮೀಟರ್ ಉದ್ದದ ಕನ್ನಡ ಧ್ವಜದ ಮೆರವಣಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ವಿಶೇಷ ಮೆರುಗು ತಂದಿತ್ತು.</p>.<p>ನಗರದ ವಿವಿಧ ಶಾಲೆಗಳ 400ಕ್ಕೂ ಅಧಿಕ ಮಕ್ಕಳು ಧ್ವಜ ಹಿಡಿದು ಸಾಗುತ್ತಿದ್ದರೆ ಹಿನ್ನೆಲೆಯಲ್ಲಿ ಕನ್ನಡದ ಗೀತೆ ಮೊಳಗುತ್ತಿತ್ತು. ಹಾದಿ, ಬೀದಿಯಲ್ಲಿ ಸಾಗುವವರು, ಬೆಳಗಿನ ಮನೆವಾರ್ತೆ ಮಾಡುತ್ತಿದ್ದ ಹೆಂಗಸರು ಕುತೂಹಲದಿಂದ ಹೊರಗೆ ಬಂದು ಕನ್ನಡ ಧ್ವಜದ ಮೆರವಣಿಗೆ ನೋಡಿ ಸಂಭ್ರಮಿಸಿದರು.</p>.<p>ರೆಡ್ ಆ್ಯಂಟ್ ಸಂಘಟನೆಯ ಮಹೇಶ ನಾಯ್ಕ ಮತ್ತು ಗೆಳೆಯರು ಕನ್ನಡದ ಮೇಲಿನ ಪ್ರೀತಿ, ಮಕ್ಕಳಲ್ಲಿ ಕನ್ನಡ ನಾಡಿನ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶದಿಂದ ₹12 ಸಾವಿರ ವೆಚ್ಚದಲ್ಲಿ ಒಂದು ವಾರ ಕಾಲ ಕೆಲಸ ಮಾಡಿ ಈ ಧ್ವಜ ಸಿದ್ಧಪಡಿಸಿದ್ದಾರೆ.</p>.<p>ಮಾರಿಕಾಂಬಾ ಪ್ರೌಢಶಾಲೆಯ ಮೈದಾನದಲ್ಲಿ ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಧ್ವಜಾರೋಹಣ ನೆರವೇರಿಸಿ, ಕನ್ನಡಾಂಬೆಗೆ ಪೂಜೆ ಸಲ್ಲಿಸಿದರು. ಶಾಲಾ ಮಕ್ಕಳು ಆಕರ್ಷಕ ಪಥ ಸಂಚಲನ ನಡೆಸಿದರು.</p>.<p><strong>ಕಾರವಾರ:</strong> ಪೊಲೀಸ್ ಪರೇಡ್ ಮೈದಾನದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕನ್ನಡ ಧ್ವಜಾರೋಹಣ ನೆರವೇರಿಸಿದರು.</p>.<p>ಜಿಲ್ಲಾ ಸಶಸ್ತ್ರ ಪಡೆ, ಅರಣ್ಯ ಇಲಾಖೆ, ಎನ್ಎಸ್ಎಸ್ ತುಕುಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.</p>.<p><strong>ಹಾವೇರಿ</strong>ಯಲ್ಲಿ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ರುದ್ರಪ್ಪ ಲಮಾಣಿ.</p>.<p><strong>ಮಂಗಳೂರಿನ</strong> ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಧ್ವಜಾರೋಹಣ ನೆರವೇರಿಸಿದರು.</p>.<p><strong>ತುಮಕೂರು: </strong>ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಧ್ವಜಾರೋಹಣ ಮಾಡಿದರು.</p>.<p>ವಿವಿಧ ಶಾಲಾ ಕಾಲೇಜು, ಪೊಲೀಸ್, ಎನ್ಸಿಸಿ ಕವಾಯತು ತಂಡಗಳು ನಡೆಸಿದ ಪಥ ಸಂಚಲನ ಆಕರ್ಷಕವಾಗಿತ್ತು. ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ನಾಡು ನುಡಿ ಅಭಿಮಾನ ಗೀತೆಗಳಿಗೆ ನೃತ್ಯ ಮಾಡಿದರು.</p>.<p><strong>ಚಿತ್ರದುರ್ಗ:</strong> ಕನ್ನಡ ಉತ್ಸವದಲ್ಲಿ ಕೆಎಸ್ಆರ್ಟಿಸಿಯ 'ಕನ್ನಡ ರಥ’ ಗಮನ ಸೆಳೆಯಿತು.</p>.<p><br /> ಜಿಲ್ಲಾ ಉಸ್ತುವಾರಿ ಸಚಿವ ಆಂಜನೇಯ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು. ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.</p>.<p><strong>ಮಂಡ್ಯ</strong>ದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ</p>.<p><br /> <strong>ಕಲಬುರ್ಗಿ: </strong>ಇಲ್ಲಿನ ನೆಹರೂ ಗಂಜ್ ಪ್ರದೇಶದ ನಗರೇಶ್ವರ ಬಾಲ ಮಂದಿರದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅದ್ಧೂರಿ ಚಾಲನೆ ನೀಡಿದರು.</p>.<p>ಸಾರೋಟಿನಲ್ಲಿ ಪ್ರತಿಷ್ಠಾಪಿಸಿದ್ದ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚಣೆ ಮಾಡಿದರು.</p>.<p>ಈ ವೇಳೆ ಡೊಳ್ಳು ಕಲಾವಿದರ ಪ್ರದರ್ಶನ ಗಮನ ಸೆಳೆಯಿತು.</p>.<p>ಶಾಸಕ ಬಿ.ಜಿ.ಪಾಟೀಲ, ಮೇಯರ್ ಶರಣಕುಮಾರ ಮೋದಿ, ಎನ್.ಇ.ಕೆ.ಆರ್.ಟಿ.ಸಿ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ: </strong>160 ಮೀಟರ್ ಉದ್ದದ ಕನ್ನಡ ಧ್ವಜದ ಮೆರವಣಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ವಿಶೇಷ ಮೆರುಗು ತಂದಿತ್ತು.</p>.<p>ನಗರದ ವಿವಿಧ ಶಾಲೆಗಳ 400ಕ್ಕೂ ಅಧಿಕ ಮಕ್ಕಳು ಧ್ವಜ ಹಿಡಿದು ಸಾಗುತ್ತಿದ್ದರೆ ಹಿನ್ನೆಲೆಯಲ್ಲಿ ಕನ್ನಡದ ಗೀತೆ ಮೊಳಗುತ್ತಿತ್ತು. ಹಾದಿ, ಬೀದಿಯಲ್ಲಿ ಸಾಗುವವರು, ಬೆಳಗಿನ ಮನೆವಾರ್ತೆ ಮಾಡುತ್ತಿದ್ದ ಹೆಂಗಸರು ಕುತೂಹಲದಿಂದ ಹೊರಗೆ ಬಂದು ಕನ್ನಡ ಧ್ವಜದ ಮೆರವಣಿಗೆ ನೋಡಿ ಸಂಭ್ರಮಿಸಿದರು.</p>.<p>ರೆಡ್ ಆ್ಯಂಟ್ ಸಂಘಟನೆಯ ಮಹೇಶ ನಾಯ್ಕ ಮತ್ತು ಗೆಳೆಯರು ಕನ್ನಡದ ಮೇಲಿನ ಪ್ರೀತಿ, ಮಕ್ಕಳಲ್ಲಿ ಕನ್ನಡ ನಾಡಿನ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶದಿಂದ ₹12 ಸಾವಿರ ವೆಚ್ಚದಲ್ಲಿ ಒಂದು ವಾರ ಕಾಲ ಕೆಲಸ ಮಾಡಿ ಈ ಧ್ವಜ ಸಿದ್ಧಪಡಿಸಿದ್ದಾರೆ.</p>.<p>ಮಾರಿಕಾಂಬಾ ಪ್ರೌಢಶಾಲೆಯ ಮೈದಾನದಲ್ಲಿ ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಧ್ವಜಾರೋಹಣ ನೆರವೇರಿಸಿ, ಕನ್ನಡಾಂಬೆಗೆ ಪೂಜೆ ಸಲ್ಲಿಸಿದರು. ಶಾಲಾ ಮಕ್ಕಳು ಆಕರ್ಷಕ ಪಥ ಸಂಚಲನ ನಡೆಸಿದರು.</p>.<p><strong>ಕಾರವಾರ:</strong> ಪೊಲೀಸ್ ಪರೇಡ್ ಮೈದಾನದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕನ್ನಡ ಧ್ವಜಾರೋಹಣ ನೆರವೇರಿಸಿದರು.</p>.<p>ಜಿಲ್ಲಾ ಸಶಸ್ತ್ರ ಪಡೆ, ಅರಣ್ಯ ಇಲಾಖೆ, ಎನ್ಎಸ್ಎಸ್ ತುಕುಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.</p>.<p><strong>ಹಾವೇರಿ</strong>ಯಲ್ಲಿ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ರುದ್ರಪ್ಪ ಲಮಾಣಿ.</p>.<p><strong>ಮಂಗಳೂರಿನ</strong> ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಧ್ವಜಾರೋಹಣ ನೆರವೇರಿಸಿದರು.</p>.<p><strong>ತುಮಕೂರು: </strong>ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಧ್ವಜಾರೋಹಣ ಮಾಡಿದರು.</p>.<p>ವಿವಿಧ ಶಾಲಾ ಕಾಲೇಜು, ಪೊಲೀಸ್, ಎನ್ಸಿಸಿ ಕವಾಯತು ತಂಡಗಳು ನಡೆಸಿದ ಪಥ ಸಂಚಲನ ಆಕರ್ಷಕವಾಗಿತ್ತು. ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ನಾಡು ನುಡಿ ಅಭಿಮಾನ ಗೀತೆಗಳಿಗೆ ನೃತ್ಯ ಮಾಡಿದರು.</p>.<p><strong>ಚಿತ್ರದುರ್ಗ:</strong> ಕನ್ನಡ ಉತ್ಸವದಲ್ಲಿ ಕೆಎಸ್ಆರ್ಟಿಸಿಯ 'ಕನ್ನಡ ರಥ’ ಗಮನ ಸೆಳೆಯಿತು.</p>.<p><br /> ಜಿಲ್ಲಾ ಉಸ್ತುವಾರಿ ಸಚಿವ ಆಂಜನೇಯ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು. ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.</p>.<p><strong>ಮಂಡ್ಯ</strong>ದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ</p>.<p><br /> <strong>ಕಲಬುರ್ಗಿ: </strong>ಇಲ್ಲಿನ ನೆಹರೂ ಗಂಜ್ ಪ್ರದೇಶದ ನಗರೇಶ್ವರ ಬಾಲ ಮಂದಿರದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅದ್ಧೂರಿ ಚಾಲನೆ ನೀಡಿದರು.</p>.<p>ಸಾರೋಟಿನಲ್ಲಿ ಪ್ರತಿಷ್ಠಾಪಿಸಿದ್ದ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚಣೆ ಮಾಡಿದರು.</p>.<p>ಈ ವೇಳೆ ಡೊಳ್ಳು ಕಲಾವಿದರ ಪ್ರದರ್ಶನ ಗಮನ ಸೆಳೆಯಿತು.</p>.<p>ಶಾಸಕ ಬಿ.ಜಿ.ಪಾಟೀಲ, ಮೇಯರ್ ಶರಣಕುಮಾರ ಮೋದಿ, ಎನ್.ಇ.ಕೆ.ಆರ್.ಟಿ.ಸಿ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>