ಚಿತ್ರದುರ್ಗ: ಹೊಸ ರೈಲು ಮಾರ್ಗಗಳ ಅಭಿವೃದ್ಧಿಗಾಗಿ ರಾಜ್ಯಕ್ಕೆ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದೇ ಹೋದರೆ, ಆ ಅನುದಾನವನ್ನು ಇತರೆ ರಾಜ್ಯಗಳಿಗೆ ಹಂಚಿಕೆ ಮಾಡುವುದಾಗಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದರು.
ಹೊಸದುರ್ಗದಲ್ಲಿ ಭಾನುವಾರ ಹೊಸದುರ್ಗ ರೋಡ್-ಚಿಕ್ಕಜಾಜೂರು ಜೋಡಿ ರೈಲು ಮಾರ್ಗದ ಶಂಕುಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಹರಿಹರ-ಕೊಟ್ಟೂರು, ಚಿಕ್ಕಮಗಳೂರು-ಕಡೂರು, ರಾಮನಗರ - ಮದ್ದೂರು, ಮದ್ದೂರು-ಮೈಸೂರು.