'ನಮ್ಮ ಗುರಿ ಸರ್ಕಾರವನ್ನು ಉರುಳಿಸುವುದಲ್ಲ' ಎಂದು ಸುಮಾರು ಎರಡು ತಿಂಗಳುಗಳ ಹಿಂದೆ ಬಿಜೆಪಿ ತ್ಯಜಿಸಿದ ಯಡಿಯೂರಪ್ಪ ನುಡಿದರು.
ಸರ್ಕಾರವನ್ನು ಉರುಳಿಸಬಯಸಿದ್ದರೆ ಡಿಸೆಂಬರ್ 9ರಂದೇ ಶಾಸಕರನ್ನು ಸೇರಿಸಿ ಆ ಕೆಲಸ ಮಾಡುತ್ತಿದ್ದೆ ಎಂದು ಅವರು ನುಡಿದರು.
13 ಶಾಸಕರು ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ ಬಗ್ಗೆ ಪ್ರಸ್ತಾಪಿಸಿದ ಅವರು, ಚುನಾವಣೆ ಶೀಘ್ರವಾಗಿ ಹತ್ತಿರ ಬರುತ್ತಿರುವುದರಿಂದ ಪಕ್ಷವನ್ನು ಬಲಗೊಳಿಸುವ ಸಲುವಾಗಿ ಅವರೆಲ್ಲರೂ ಕೆಜೆಪಿ ಸೇರುತ್ತಿದ್ದಾರೆ. ಈ ಶಾಸಕರ ಉದ್ದೇಶ ಸರ್ಕಾರವನ್ನು ಬೀಳಿಸುವುದಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಮುಂಗಡಪತ್ರ ಮಂಡಿಸದಂತೆ ಶೆಟ್ಟರ ಅವರನ್ನು ತಡೆಯುವ ಸಲುವಾಗಿ ಯಡಿಯೂರಪ್ಪ ಅವರು ಶಾಸಕರನ್ನು ಸೆಳಯುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಕೆಜೆಪಿ ಮುಖ್ಯಸ್ಥ 'ಮುಂಗಡಪತ್ರ ಮಂಡನೆಯನ್ನು ವಿರೋಧಿಸಬಯಸಿದ್ದರೆ, ನಾನು ಒಂದೇ ಸಲಕ್ಕೆ 20 ಶಾಸಕರ ರಾಜೀನಾಮೆ ಕೊಡಿಸುತ್ತಿದ್ದೆ. ನಮಗೆ ಅಂತಹ ಉದ್ದೇಶವಿಲ್ಲ' ಎಂದು ಹೇಳಿದರು.