<p><strong>ಮೈಸೂರು: </strong>‘ಕನ್ನಡ ಸಾಹಿತ್ಯದಲ್ಲಿ ವಿಮರ್ಶಕರು ವಿರೋಧ ಪಕ್ಷದ ನೇತಾರರಲ್ಲ. ಹಾಗೆಯೇ, ಸಂಶೋಧಕರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಲ್ಲ’ ಎಂದು ಮೈಸೂರು ವಿವಿಯ ಬಸವ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.<br /> <br /> ಇಲ್ಲಿಯ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ‘ಬಸವಣ್ಣ; ತೌಲನಿಕ ತಾತ್ವಿಕತೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಆಶಯ ನುಡಿಗಳನ್ನಾಡಿದರು.<br /> <br /> ‘ವಿಮರ್ಶೆ ಎಂದರೆ ಟೀಕೆ ಮಾಡುವಂಥದ್ದಲ್ಲ. ಟೀಕು ಎಂದರೆ ಸರಿ. ಟೀಕುಗೆ ಬೇರೆ ಅರ್ಥವಿದೆ. ಆದರೆ, ಟೀಕೆ ಎಂದರೆ ಟೀಕೆ ಆಗಿರಬೇಕಿಲ್ಲ. ವಿಮರ್ಶೆ ಎಂದರೆ ಪ್ರಬುದ್ಧ ವಿಶ್ಲೇಷಣ ಪ್ರಕ್ರಿಯೆ. ಆ ಪ್ರಕ್ರಿಯೆ ಮುಖಾಂತರ ನಿಲುವಿಗೆ, ನೆಲೆಗೆ ತಲುಪಬಹುದು. ಜತೆಗೆ, ಕೃತಿಯ ಸಂದರ್ಭದಲ್ಲಿನ ಒಳನೋಟವನ್ನು ಸಹೃದಯರಿಗೆ ತೆರೆದಿಡಬೇಕು. ಆದರೆ, ವಿಮರ್ಶೆ ಎಂದರೆ ವಿರೋಧಿಸುವುದೇ ಆಗಬಾರದು. ಹೀಗಾಗಿ, ವಿಮರ್ಶೆ ಎಂದರೆ ವಿರೋಧಪಕ್ಷವಲ್ಲ; ಸಂಶೋಧನೆ ಎಂದರೆ ಸುಪ್ರೀಂ ಕೋರ್ಟ್ ಅಲ್ಲ. ನಾನು ಸಂಶೋಧನೆ ಮಾಡಿ ಹೇಳಿದ್ದೇ ಕಟ್ಟ ಕಡೆಯದು ಎಂದರೆ ಸ್ವಅಧ್ಯಾಯವಾಗುತ್ತದೆ. ಸಂಶೋಧನೆ ಎನ್ನುವಲ್ಲಿಯೇ ಶೋಧನೆ ಇದೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>‘ಕನ್ನಡ ಸಾಹಿತ್ಯದಲ್ಲಿ ವಿಮರ್ಶಕರು ವಿರೋಧ ಪಕ್ಷದ ನೇತಾರರಲ್ಲ. ಹಾಗೆಯೇ, ಸಂಶೋಧಕರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಲ್ಲ’ ಎಂದು ಮೈಸೂರು ವಿವಿಯ ಬಸವ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.<br /> <br /> ಇಲ್ಲಿಯ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ‘ಬಸವಣ್ಣ; ತೌಲನಿಕ ತಾತ್ವಿಕತೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಆಶಯ ನುಡಿಗಳನ್ನಾಡಿದರು.<br /> <br /> ‘ವಿಮರ್ಶೆ ಎಂದರೆ ಟೀಕೆ ಮಾಡುವಂಥದ್ದಲ್ಲ. ಟೀಕು ಎಂದರೆ ಸರಿ. ಟೀಕುಗೆ ಬೇರೆ ಅರ್ಥವಿದೆ. ಆದರೆ, ಟೀಕೆ ಎಂದರೆ ಟೀಕೆ ಆಗಿರಬೇಕಿಲ್ಲ. ವಿಮರ್ಶೆ ಎಂದರೆ ಪ್ರಬುದ್ಧ ವಿಶ್ಲೇಷಣ ಪ್ರಕ್ರಿಯೆ. ಆ ಪ್ರಕ್ರಿಯೆ ಮುಖಾಂತರ ನಿಲುವಿಗೆ, ನೆಲೆಗೆ ತಲುಪಬಹುದು. ಜತೆಗೆ, ಕೃತಿಯ ಸಂದರ್ಭದಲ್ಲಿನ ಒಳನೋಟವನ್ನು ಸಹೃದಯರಿಗೆ ತೆರೆದಿಡಬೇಕು. ಆದರೆ, ವಿಮರ್ಶೆ ಎಂದರೆ ವಿರೋಧಿಸುವುದೇ ಆಗಬಾರದು. ಹೀಗಾಗಿ, ವಿಮರ್ಶೆ ಎಂದರೆ ವಿರೋಧಪಕ್ಷವಲ್ಲ; ಸಂಶೋಧನೆ ಎಂದರೆ ಸುಪ್ರೀಂ ಕೋರ್ಟ್ ಅಲ್ಲ. ನಾನು ಸಂಶೋಧನೆ ಮಾಡಿ ಹೇಳಿದ್ದೇ ಕಟ್ಟ ಕಡೆಯದು ಎಂದರೆ ಸ್ವಅಧ್ಯಾಯವಾಗುತ್ತದೆ. ಸಂಶೋಧನೆ ಎನ್ನುವಲ್ಲಿಯೇ ಶೋಧನೆ ಇದೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>