<p><strong>ಮಡಿಕೇರಿ: </strong>ಕಡಂಬುಟ್ಟು (ಕಡಬು) ಚಟ್ನಿ, ಅಕ್ಕಿ ಪಾಯಸ, ಅಕ್ಕಿರೊಟ್ಟಿ... ಈ ಕೊಡಗಿನ ವಿಶಿಷ್ಟ ಖಾದ್ಯಗಳು ಜನವರಿ ಏಳರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರಿಗೆ ಲಭ್ಯವಾಗಲಿವೆ.<br /> <br /> ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯಕ ಚಟುವಟಿಕೆಗಳ ಜೊತೆ ಊಟೋಪಚಾರಕ್ಕೂ ಪ್ರಾಮುಖ್ಯತೆ ಇದೆ. ಬಗೆ ಬಗೆಯ ವಿಶಿಷ್ಟ ಊಟೋಪಚಾರವನ್ನು ಸಮ್ಮೇಳನಗಳಲ್ಲಿ ಭಾಗವಹಿಸಲು ಬಂದವರು ಬಯಸುವುದು ಸಹಜ. ಸಮ್ಮೇಳನ ನಡೆಯುವ ಆಯಾ ಜಿಲ್ಲೆಯ ಆಹಾರ ಪದ್ಧತಿಯ ಅನಾವರಣಕ್ಕೂ ಇಲ್ಲಿ ಅವಕಾಶ ಇರುತ್ತದೆ.<br /> <br /> ವಿವಿಧ ಪ್ರದೇಶಗಳ ಆಹಾರ ಪದ್ಧತಿಯನ್ನು ಕೂಡ ಗಮನದಲ್ಲಿಟ್ಟುಕೊಂಡು ಆಹಾರ ಸಮಿತಿಯು ಮೆನು ತಯಾರಿಸಿದೆ. ಕೊಡಗಿನ ಆಹಾರದ ಜೊತೆ ಉತ್ತರ ಕರ್ನಾಟಕದ ಜೋಳದರೊಟ್ಟಿ, ಎಣ್ಣಗಾಯಿ, ಮೆಣಸು, ಖಾರ ಕೆಂಪು ಚಟ್ನಿಗೂ ಅವಕಾಶ ದೊರೆತಿದೆ.</p>.<p><br /> <br /> ಅಡಿಕೆ ಹಾಳೆಯ ಪ್ಲೇಟ್: ಸಮ್ಮೇಳನದಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಿರಲು ನಿರ್ಧರಿಸಲಾಗಿದೆ. ಅಡಿಕೆ ಹಾಳೆಯ ಪ್ಲೇಟ್ ಹಾಗೂ ಪೇಪರ್ ಕಪ್ಗಳನ್ನು ಬಳಸಲಾಗುವುದು. ಸುಮಾರು 2 ಲಕ್ಷದಷ್ಟು ಅಡಿಕೆ ಹಾಳೆಗಳನ್ನು ತರಿಸಿಕೊಳ್ಳಲಾಗಿದೆ. ಕುಡಿಯಲು ಖನಿಜಯುಕ್ತ ನೀರು ಪೂರೈಕೆಯಾಗಲಿದೆ.<br /> <br /> ನುರಿತ ಬಾಣಸಿಗರ ತಂಡ: ಅಡುಗೆ ತಯಾರಿಸಿಕೊಡುವ ಟೆಂಡರ್ ಹುಬ್ಬಳ್ಳಿಯ ‘ಶ್ರೀ ಬೈರು ಕ್ಯಾಟರರ್ಸ್’ ತಂಡಕ್ಕೆ ಲಭಿಸಿದೆ. ಈ ತಂಡವು ಇದಕ್ಕೂ ಮುಂಚೆ ಗಂಗಾವತಿಯಲ್ಲಿ ನಡೆದ 78ನೇ ಸಮ್ಮೇಳನ ಹಾಗೂ ವಿಜಾಪುರದಲ್ಲಿ ನಡೆದ 79ನೇ ಸಮ್ಮೇಳನದಲ್ಲೂ ಊಟೋಪಚಾರದ ವ್ಯವಸ್ಥೆ ವಹಿಸಿಕೊಂಡಿತ್ತು. ಹೀಗಾಗಿ ಇಂತಹ ದೊಡ್ಡ ಪ್ರಮಾಣದ ಸಮ್ಮೇಳನಗಳನ್ನು ನಿರ್ವಹಿಸಿ ಈ ತಂಡಕ್ಕೆ ಅನುಭವವಿದೆ.<br /> <br /> ‘ಆಹಾರ ಸಮಿತಿಯವರು ನೀಡಿರುವ ಪಟ್ಟಿಯಂತೆ ಊಟ ಬಡಿಸಲು ನಾವು ಸಿದ್ಧರಿದ್ದೇವೆ. ಕೊಡಗಿನ ಖಾದ್ಯಗಳಾದ ಕಡಂಬುಟ್ಟು (ಕಡಬು) ಚಟ್ನಿ, ಅಕ್ಕಿ ಪಾಯಸ, ಅಕ್ಕಿರೊಟ್ಟಿಯನ್ನು ಮಾಡಲು ಸ್ಥಳೀಯ ಬಾಣಸಿಗರ ಸಹಾಯ ಪಡೆಯಲಿದ್ದೇವೆ ’ ಎಂದು ತಂಡದ ಮುಖ್ಯಸ್ಥರಾದ ಪ್ರಕಾಶ ಬಾಬುಲಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ‘ಊಟ, ತಿಂಡಿ ತಯಾರಿಸಲು ಬೇಕಾದ ಪಡಿತರವನ್ನು ಆಹಾರ ಸಮಿತಿಯಿಂದಲೇ ನೀಡಲಾಗುತ್ತದೆ. 600 ಬಾಣಸಿಗರು, 2,000ಕ್ಕೂ ಹೆಚ್ಚು ಸ್ವಯಂಸೇವಕರು, 10 ಉಪಸಮಿತಿಗಳು ಹಾಗೂ 250ಕ್ಕೂ ಹೆಚ್ಚು ಸಕ್ರಿಯ ಸದಸ್ಯರು ಊಟೋಪಚಾರದ ವ್ಯವಸ್ಥೆಯನ್ನು ನೋಡಿಕೊಳ್ಳಲಿದ್ದಾರೆ’ ಎಂದು ಆಹಾರ ಸಮಿತಿಯ ಸಂಚಾಲಕ ಕೇಶವ ಕಾಮತ್ ಹೇಳಿದರು.<br /> <br /> ಅಡುಗೆ ಮಾಡಿ ಬಡಿಸಲು ಟೆಂಡರ್ ಕರೆಯಲಾಗಿತ್ತು. ಏಳು ಪ್ರಮುಖ ತಂಡಗಳು ಟೆಂಡರ್ನಲ್ಲಿ ಭಾಗವಹಿಸಿದ್ದವು. ಅವರಲ್ಲಿ ಬೈರು ಕ್ಯಾಟರರ್ಸ್ ತಂಡಕ್ಕೆ ಟೆಂಡರ್ ಲಭಿಸಿದೆ. ಜನವರಿ 6ರ ರಾತ್ರಿಯಿಂದಲೇ ಸಮ್ಮೇಳನಕ್ಕೆ ಬಂದವರಿಗೆ ಊಟ ನೀಡಲಾಗುತ್ತದೆ. ನಾಲ್ಕು ರಾತ್ರಿ– 3 ದಿನಗಳ ಕಾಲ ಊಟೋಪಚಾರದ ವ್ಯವಸ್ಥೆ ಮಾಡಿದ್ದೇವೆ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ: </strong>ಕಡಂಬುಟ್ಟು (ಕಡಬು) ಚಟ್ನಿ, ಅಕ್ಕಿ ಪಾಯಸ, ಅಕ್ಕಿರೊಟ್ಟಿ... ಈ ಕೊಡಗಿನ ವಿಶಿಷ್ಟ ಖಾದ್ಯಗಳು ಜನವರಿ ಏಳರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರಿಗೆ ಲಭ್ಯವಾಗಲಿವೆ.<br /> <br /> ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯಕ ಚಟುವಟಿಕೆಗಳ ಜೊತೆ ಊಟೋಪಚಾರಕ್ಕೂ ಪ್ರಾಮುಖ್ಯತೆ ಇದೆ. ಬಗೆ ಬಗೆಯ ವಿಶಿಷ್ಟ ಊಟೋಪಚಾರವನ್ನು ಸಮ್ಮೇಳನಗಳಲ್ಲಿ ಭಾಗವಹಿಸಲು ಬಂದವರು ಬಯಸುವುದು ಸಹಜ. ಸಮ್ಮೇಳನ ನಡೆಯುವ ಆಯಾ ಜಿಲ್ಲೆಯ ಆಹಾರ ಪದ್ಧತಿಯ ಅನಾವರಣಕ್ಕೂ ಇಲ್ಲಿ ಅವಕಾಶ ಇರುತ್ತದೆ.<br /> <br /> ವಿವಿಧ ಪ್ರದೇಶಗಳ ಆಹಾರ ಪದ್ಧತಿಯನ್ನು ಕೂಡ ಗಮನದಲ್ಲಿಟ್ಟುಕೊಂಡು ಆಹಾರ ಸಮಿತಿಯು ಮೆನು ತಯಾರಿಸಿದೆ. ಕೊಡಗಿನ ಆಹಾರದ ಜೊತೆ ಉತ್ತರ ಕರ್ನಾಟಕದ ಜೋಳದರೊಟ್ಟಿ, ಎಣ್ಣಗಾಯಿ, ಮೆಣಸು, ಖಾರ ಕೆಂಪು ಚಟ್ನಿಗೂ ಅವಕಾಶ ದೊರೆತಿದೆ.</p>.<p><br /> <br /> ಅಡಿಕೆ ಹಾಳೆಯ ಪ್ಲೇಟ್: ಸಮ್ಮೇಳನದಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಿರಲು ನಿರ್ಧರಿಸಲಾಗಿದೆ. ಅಡಿಕೆ ಹಾಳೆಯ ಪ್ಲೇಟ್ ಹಾಗೂ ಪೇಪರ್ ಕಪ್ಗಳನ್ನು ಬಳಸಲಾಗುವುದು. ಸುಮಾರು 2 ಲಕ್ಷದಷ್ಟು ಅಡಿಕೆ ಹಾಳೆಗಳನ್ನು ತರಿಸಿಕೊಳ್ಳಲಾಗಿದೆ. ಕುಡಿಯಲು ಖನಿಜಯುಕ್ತ ನೀರು ಪೂರೈಕೆಯಾಗಲಿದೆ.<br /> <br /> ನುರಿತ ಬಾಣಸಿಗರ ತಂಡ: ಅಡುಗೆ ತಯಾರಿಸಿಕೊಡುವ ಟೆಂಡರ್ ಹುಬ್ಬಳ್ಳಿಯ ‘ಶ್ರೀ ಬೈರು ಕ್ಯಾಟರರ್ಸ್’ ತಂಡಕ್ಕೆ ಲಭಿಸಿದೆ. ಈ ತಂಡವು ಇದಕ್ಕೂ ಮುಂಚೆ ಗಂಗಾವತಿಯಲ್ಲಿ ನಡೆದ 78ನೇ ಸಮ್ಮೇಳನ ಹಾಗೂ ವಿಜಾಪುರದಲ್ಲಿ ನಡೆದ 79ನೇ ಸಮ್ಮೇಳನದಲ್ಲೂ ಊಟೋಪಚಾರದ ವ್ಯವಸ್ಥೆ ವಹಿಸಿಕೊಂಡಿತ್ತು. ಹೀಗಾಗಿ ಇಂತಹ ದೊಡ್ಡ ಪ್ರಮಾಣದ ಸಮ್ಮೇಳನಗಳನ್ನು ನಿರ್ವಹಿಸಿ ಈ ತಂಡಕ್ಕೆ ಅನುಭವವಿದೆ.<br /> <br /> ‘ಆಹಾರ ಸಮಿತಿಯವರು ನೀಡಿರುವ ಪಟ್ಟಿಯಂತೆ ಊಟ ಬಡಿಸಲು ನಾವು ಸಿದ್ಧರಿದ್ದೇವೆ. ಕೊಡಗಿನ ಖಾದ್ಯಗಳಾದ ಕಡಂಬುಟ್ಟು (ಕಡಬು) ಚಟ್ನಿ, ಅಕ್ಕಿ ಪಾಯಸ, ಅಕ್ಕಿರೊಟ್ಟಿಯನ್ನು ಮಾಡಲು ಸ್ಥಳೀಯ ಬಾಣಸಿಗರ ಸಹಾಯ ಪಡೆಯಲಿದ್ದೇವೆ ’ ಎಂದು ತಂಡದ ಮುಖ್ಯಸ್ಥರಾದ ಪ್ರಕಾಶ ಬಾಬುಲಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ‘ಊಟ, ತಿಂಡಿ ತಯಾರಿಸಲು ಬೇಕಾದ ಪಡಿತರವನ್ನು ಆಹಾರ ಸಮಿತಿಯಿಂದಲೇ ನೀಡಲಾಗುತ್ತದೆ. 600 ಬಾಣಸಿಗರು, 2,000ಕ್ಕೂ ಹೆಚ್ಚು ಸ್ವಯಂಸೇವಕರು, 10 ಉಪಸಮಿತಿಗಳು ಹಾಗೂ 250ಕ್ಕೂ ಹೆಚ್ಚು ಸಕ್ರಿಯ ಸದಸ್ಯರು ಊಟೋಪಚಾರದ ವ್ಯವಸ್ಥೆಯನ್ನು ನೋಡಿಕೊಳ್ಳಲಿದ್ದಾರೆ’ ಎಂದು ಆಹಾರ ಸಮಿತಿಯ ಸಂಚಾಲಕ ಕೇಶವ ಕಾಮತ್ ಹೇಳಿದರು.<br /> <br /> ಅಡುಗೆ ಮಾಡಿ ಬಡಿಸಲು ಟೆಂಡರ್ ಕರೆಯಲಾಗಿತ್ತು. ಏಳು ಪ್ರಮುಖ ತಂಡಗಳು ಟೆಂಡರ್ನಲ್ಲಿ ಭಾಗವಹಿಸಿದ್ದವು. ಅವರಲ್ಲಿ ಬೈರು ಕ್ಯಾಟರರ್ಸ್ ತಂಡಕ್ಕೆ ಟೆಂಡರ್ ಲಭಿಸಿದೆ. ಜನವರಿ 6ರ ರಾತ್ರಿಯಿಂದಲೇ ಸಮ್ಮೇಳನಕ್ಕೆ ಬಂದವರಿಗೆ ಊಟ ನೀಡಲಾಗುತ್ತದೆ. ನಾಲ್ಕು ರಾತ್ರಿ– 3 ದಿನಗಳ ಕಾಲ ಊಟೋಪಚಾರದ ವ್ಯವಸ್ಥೆ ಮಾಡಿದ್ದೇವೆ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>