‘ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಗಳು ದಿನಕ್ಕೆ 10ರಿಂದ 15 ಲಕ್ಷ ಲೀಟರ್ ಹಾಲು ಮಾರುತ್ತಿವೆ. ನಮಗೂ ಇಲ್ಲಿ ಹಾಲು ಮಾರಾಟಕ್ಕೆ ಅವಕಾಶ ಕಲ್ಪಿಸಿದರೆ, ಪ್ರತಿ ಲೀಟರ್ ಹಾಲನ್ನು ಇತರ ಕಂಪೆನಿಗಳಿಗಿಂತ ₹ 5 ಕಡಿಮೆ ದರದಲ್ಲಿ ಮಾರುತ್ತೇವೆ. ಖಾಸಗಿಯವರ ಪೈಪೋಟಿ ಎದುರಿಸುತ್ತೇವೆ’ ಎಂದು ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಸನ ಹಾಲು ಒಕ್ಕೂಟವು ಪ್ರತಿ ದಿನ 6.5 ಲಕ್ಷ ಲೀಟರ್ ಹಾಲನ್ನು, ಪುಡಿ ತಯಾರಿಸಲು ಕಳುಹಿಸುತ್ತಿದೆ. ಒಕ್ಕೂಟವು ₹ 21 ಕೋಟಿ ನಷ್ಟದಲ್ಲಿದೆ, ಹೈನುಗಾರರಿಗೆ ₹ 30 ಕೋಟಿ ಪಾವತಿಸಬೇಕಿದೆ. ಬೆಂಗಳೂರಿನಲ್ಲಿ ಹಾಲು ಮಾರಲು ಅವಕಾಶ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಹೇಮಾವತಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಇಲ್ಲಿ ಸಂಗ್ರಹವಾದ ನೀರು ಬಳಸಿ ಬೆಳೆ ಬೆಳೆಯುವ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಪಂಜಾಬ್ನಿಂದ ತಂದು ಬಿತ್ತಿದ ಆಲೂಗಡ್ಡೆ ಬೆಳೆ ಹಾಸನ ಜಿಲ್ಲೆಯಲ್ಲಿ ಕೈಕೊಟ್ಟಿದೆ. ಈ ವಿಚಾರಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಭೆ ಕರೆಯದಿದ್ದರೆ, ಸೆ. 10ರಂದು ಅವರ ಮನೆ ಮುಂದೆ ಧರಣಿ ನಡೆಸುವೆ ಎಂದು ಎಚ್ಚರಿಸಿದರು.