<p><strong>ಸಿಂಗಾಪುರ</strong>: ಸಿಂಗಾಪುರದ ಶಾಲೆಗಳಲ್ಲಿ ತೆಲುಗನ್ನು ಎರಡನೇ ಭಾಷೆಯಾಗಿ ಕಲಿಸಬೇಕೆಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕರೆ ನೀಡಿದರು. ಇಲ್ಲಿನ ಒನ್ ವರ್ಲ್ಡ್ ಇಂಟರ್ನ್ಯಾಷನಲ್ ಸ್ಕೂಲ್ ಡಿಜಿಟಲ್ ಕ್ಯಾಂಪಸ್ನಲ್ಲಿ ಸುಮಾರು 2 ಸಾವಿರ ಅನಿವಾಸಿ ಭಾರತೀಯರೊಂದಿಗೆ ಅವರು ಮಾತನಾಡುತ್ತಿದ್ದರು. </p>.<p>ಆಂಧ್ರ ಪ್ರದೇಶಕ್ಕೆ ಹೂಡಿಕೆಗಳನ್ನು ಆಕರ್ಷಿಸಲು ಐದು ದಿನಗಳ ಅಧೀಕೃತ ಭೇಟಿಗಾಗಿ ಅವರು ಸಿಂಗಾಪುರಕ್ಕೆ ಬಂದಿದ್ದಾರೆ.</p>.<p>ಸಿಂಗಾಪುರದಲ್ಲಿ ತೆಲುಗು ಮೂಲದ ಸುಮಾರು 40 ಸಾವಿರ ಜನರಿದ್ದಾರೆ ಎಂದು ಸಮುದಾಯದ ನಾಯಕರೊಬ್ಬರು ಹೇಳಿದ್ದಾರೆ. ಸಿಂಗಾಪುರದ ನಾಲ್ಕು ಅಧಿಕೃತ ಭಾಷೆಗಳಲ್ಲಿ ತಮಿಳು ಕೂಡ ಒಂದು. ಇಲ್ಲಿನ ಶಾಲೆಗಳಲ್ಲಿ ಮಾತೃಭಾಷೆಯಾಗಿ ಹಿಂದಿ, ಪಂಜಾಬಿ ಆಯ್ಕೆ ಮಾಡಿಕೊಳ್ಳಲೂ ಅವಕಾಶವಿದೆಉ ಎಂದು ಹೇಳಿದರು. </p>.<p>‘ತೆಲುಗು ಭಾಷೆಯನ್ನು ಎರಡನೇ ಭಾಷೆಯಾಗಿ ಕಲಿಸುವಂತೆ ಸಿಂಗಾಪುರ ಸರ್ಕಾರದ ಜೊತೆಗೆ ಚರ್ಚಿಸುವಂತೆ ನನ್ನನ್ನು ಚಂದ್ರಬಾಬು ನಾಯ್ಡು ಕೇಳಿಕೊಂಡರು’ ಎಂದು ಭಾರತೀಯ ಹೈಕಮಿಷನರ್ ಡಾ. ಶಿಲ್ಪಕ್ ಅಂಬುಲೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಗಾಪುರ</strong>: ಸಿಂಗಾಪುರದ ಶಾಲೆಗಳಲ್ಲಿ ತೆಲುಗನ್ನು ಎರಡನೇ ಭಾಷೆಯಾಗಿ ಕಲಿಸಬೇಕೆಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕರೆ ನೀಡಿದರು. ಇಲ್ಲಿನ ಒನ್ ವರ್ಲ್ಡ್ ಇಂಟರ್ನ್ಯಾಷನಲ್ ಸ್ಕೂಲ್ ಡಿಜಿಟಲ್ ಕ್ಯಾಂಪಸ್ನಲ್ಲಿ ಸುಮಾರು 2 ಸಾವಿರ ಅನಿವಾಸಿ ಭಾರತೀಯರೊಂದಿಗೆ ಅವರು ಮಾತನಾಡುತ್ತಿದ್ದರು. </p>.<p>ಆಂಧ್ರ ಪ್ರದೇಶಕ್ಕೆ ಹೂಡಿಕೆಗಳನ್ನು ಆಕರ್ಷಿಸಲು ಐದು ದಿನಗಳ ಅಧೀಕೃತ ಭೇಟಿಗಾಗಿ ಅವರು ಸಿಂಗಾಪುರಕ್ಕೆ ಬಂದಿದ್ದಾರೆ.</p>.<p>ಸಿಂಗಾಪುರದಲ್ಲಿ ತೆಲುಗು ಮೂಲದ ಸುಮಾರು 40 ಸಾವಿರ ಜನರಿದ್ದಾರೆ ಎಂದು ಸಮುದಾಯದ ನಾಯಕರೊಬ್ಬರು ಹೇಳಿದ್ದಾರೆ. ಸಿಂಗಾಪುರದ ನಾಲ್ಕು ಅಧಿಕೃತ ಭಾಷೆಗಳಲ್ಲಿ ತಮಿಳು ಕೂಡ ಒಂದು. ಇಲ್ಲಿನ ಶಾಲೆಗಳಲ್ಲಿ ಮಾತೃಭಾಷೆಯಾಗಿ ಹಿಂದಿ, ಪಂಜಾಬಿ ಆಯ್ಕೆ ಮಾಡಿಕೊಳ್ಳಲೂ ಅವಕಾಶವಿದೆಉ ಎಂದು ಹೇಳಿದರು. </p>.<p>‘ತೆಲುಗು ಭಾಷೆಯನ್ನು ಎರಡನೇ ಭಾಷೆಯಾಗಿ ಕಲಿಸುವಂತೆ ಸಿಂಗಾಪುರ ಸರ್ಕಾರದ ಜೊತೆಗೆ ಚರ್ಚಿಸುವಂತೆ ನನ್ನನ್ನು ಚಂದ್ರಬಾಬು ನಾಯ್ಡು ಕೇಳಿಕೊಂಡರು’ ಎಂದು ಭಾರತೀಯ ಹೈಕಮಿಷನರ್ ಡಾ. ಶಿಲ್ಪಕ್ ಅಂಬುಲೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>