<p><strong>ಬಾಕು</strong>: ಅಜರ್ಬೈಜಾನ್ನ ಬಾಕುವಿನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದಲ್ಲಿ ಜಾಗತಿಕ ದಕ್ಷಿಣದ ದೇಶಗಳಿಗೆ ಹವಾಮಾನ ನಿಧಿಯಾಗಿ ನೀಡಲಿರುವ 300 ಬಿಲಿಯನ್ ಡಾಲರ್ ಪ್ಯಾಕೇಜ್ ಅನ್ನು ಭಾರತ ತಿರಸ್ಕರಿಸಿದೆ. ಈ ಮೂಲಕ ಕಡಿಮೆ ಮೊತ್ತ ಮತ್ತು ತುಂಬಾ ವಿಳಂಬವಾಗಿದೆ ಎಂದು ಹೇಳಿದೆ.</p><p>ಭಾರತದ ಪರವಾಗಿ ಹೇಳಿಕೆ ನೀಡಿದ ಆರ್ಥಿಕ ವ್ಯವಹಾರಗಳ ಇಲಾಖೆಯ ಸಲಹೆಗಾರ್ತಿ ಚಾಂದಿನಿ ರೈನಾ, ಒಪ್ಪಂದವನ್ನು ಅಂಗೀಕರಿಸುವ ಮೊದಲು ಮಾತನಾಡಲು ಅವಕಾಶವಿರಲಿಲ್ಲ. 300 ಬಿಲಿಯನ್ ಡಾಲರ್ ಅಭಿವೃದ್ಧಿಶೀಲ ರಾಷ್ಟ್ರಗಳ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಪೂರೈಸುವುದಿಲ್ಲ’ ಎಂದಿದ್ದಾರೆ</p><p>‘ಈ ವಿಚಾರದಲ್ಲಿ ನಾವು ಅತೃಪ್ತಿ ಹೊಂದಿದ್ದೇವೆ, ಅಲ್ಲದೆ ಒಪ್ಪಂದದ ಪ್ರಕ್ರಿಯೆಯಲ್ಲಿ ನಿರಾಶೆಗೊಂಡಿದ್ದೇವೆ, ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳಲು ವಿರೋಧಿಸುತ್ತೇವೆ’ ಎಂದರು.</p><p>ಭಾರತ ನಿರ್ಧಾರವನ್ನು ನೈಜೀರಿಯಾ, ಮಲಾವಿ ಮತ್ತು ಬೊಲಿವಿಯಾ ರಾಷ್ಟ್ರಗಳು ಬೆಂಬಲಿಸಿವೆ. ಹಣಕಾಸು ನಿಧಿಗೆ ನೀಡುತ್ತಿರುವ ಹಣ ಮೊತ್ತವನ್ನು ‘ತಮಾಷೆ’ ಎಂದು ನೈಜೀರಿಯಾ ಪ್ರತಿಕ್ರಿಯಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಕು</strong>: ಅಜರ್ಬೈಜಾನ್ನ ಬಾಕುವಿನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದಲ್ಲಿ ಜಾಗತಿಕ ದಕ್ಷಿಣದ ದೇಶಗಳಿಗೆ ಹವಾಮಾನ ನಿಧಿಯಾಗಿ ನೀಡಲಿರುವ 300 ಬಿಲಿಯನ್ ಡಾಲರ್ ಪ್ಯಾಕೇಜ್ ಅನ್ನು ಭಾರತ ತಿರಸ್ಕರಿಸಿದೆ. ಈ ಮೂಲಕ ಕಡಿಮೆ ಮೊತ್ತ ಮತ್ತು ತುಂಬಾ ವಿಳಂಬವಾಗಿದೆ ಎಂದು ಹೇಳಿದೆ.</p><p>ಭಾರತದ ಪರವಾಗಿ ಹೇಳಿಕೆ ನೀಡಿದ ಆರ್ಥಿಕ ವ್ಯವಹಾರಗಳ ಇಲಾಖೆಯ ಸಲಹೆಗಾರ್ತಿ ಚಾಂದಿನಿ ರೈನಾ, ಒಪ್ಪಂದವನ್ನು ಅಂಗೀಕರಿಸುವ ಮೊದಲು ಮಾತನಾಡಲು ಅವಕಾಶವಿರಲಿಲ್ಲ. 300 ಬಿಲಿಯನ್ ಡಾಲರ್ ಅಭಿವೃದ್ಧಿಶೀಲ ರಾಷ್ಟ್ರಗಳ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಪೂರೈಸುವುದಿಲ್ಲ’ ಎಂದಿದ್ದಾರೆ</p><p>‘ಈ ವಿಚಾರದಲ್ಲಿ ನಾವು ಅತೃಪ್ತಿ ಹೊಂದಿದ್ದೇವೆ, ಅಲ್ಲದೆ ಒಪ್ಪಂದದ ಪ್ರಕ್ರಿಯೆಯಲ್ಲಿ ನಿರಾಶೆಗೊಂಡಿದ್ದೇವೆ, ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳಲು ವಿರೋಧಿಸುತ್ತೇವೆ’ ಎಂದರು.</p><p>ಭಾರತ ನಿರ್ಧಾರವನ್ನು ನೈಜೀರಿಯಾ, ಮಲಾವಿ ಮತ್ತು ಬೊಲಿವಿಯಾ ರಾಷ್ಟ್ರಗಳು ಬೆಂಬಲಿಸಿವೆ. ಹಣಕಾಸು ನಿಧಿಗೆ ನೀಡುತ್ತಿರುವ ಹಣ ಮೊತ್ತವನ್ನು ‘ತಮಾಷೆ’ ಎಂದು ನೈಜೀರಿಯಾ ಪ್ರತಿಕ್ರಿಯಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>