<p><strong>ಸಿಂಗಪುರ</strong>: ಎರಡು ವಿಮಾ ಕಂಪನಿಗಳಿಗೆ ವಂಚಿಸಿದ ಆರೋಪದಲ್ಲಿ ಭಾರತೀಯ ಸಂಜಾತ ವ್ಯಕ್ತಿಯ ವಿರುದ್ಧ ಇಲ್ಲಿನ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.</p>.<p>ಸಹಾ ರಂಜಿತ್ ಚಂದ್ರ (48) ಎಂಬುವವರು ಇಬ್ಬರು ವಿದೇಶಿ ಕಾರ್ಮಿಕರಿಗೆ ಅಂದಾಜು ₹47.30 ಲಕ್ಷ ವಿಮಾ ಹಣ ವಿತರಿಸುವ ಸಂಬಂಧ ಎರಡು ವಿಮಾ ಕಂಪನಿಗಳಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.</p>.<p>ಇಬ್ಬರು ಗಾಯಾಳು ಕಾರ್ಮಿಕರಿಗೆ ವಿಮಾ ಪರಿಹಾರ ನೀಡುವ ವಿಚಾರವಾಗಿ ವೈಟ್ಫೀಲ್ಡ್ ಲಾ ಕಾರ್ಪೊರೇಶನ್ನ ಅಧಿಕೃತ ವ್ಯಕ್ತಿಯ ಜೊತೆ ಮಾತುಕತೆ ನಡೆಸುವುದಾಗಿ ನಂಬಿಸಿ ಇವರು ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ಹಲವು ಕಂಪನಿಗಳ ನಿರ್ದೇಶಕರಾಗಿರುವ ರಂಜಿತ್ ಚಂದ್ರ ಅವರು 2020 ಜುಲೈ ಮತ್ತು ಫೆಬ್ರುವರಿ 2021ರ ನಡುವೆ ವೈಟ್ಫೀಲ್ಡ್ ಲಾ ಕಾರ್ಪೊರೇಶನ್ನ ಆಗಿನ ನಿರ್ದೇಶಕರಾಗಿದ್ದ ವಕೀಲ ಚಾರ್ಲ್ಸ್ ಯೋ ಯಾವೊ ಹುಯಿ ಎಂಬುವವರ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.</p>.<p>ಚಾರ್ಲ್ಸ್ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಅವರ ವಿರುದ್ಧ 2022 ಆಗಸ್ಟ್ನಲ್ಲಿ ಬಂಧನ ವಾರಂಟ್ ಹೊರಡಿಸಲಾಗಿತ್ತು.</p>.<p>ಸರ್ಕಾರಿ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲೂ ರಂಜಿತ್ ಚಂದ್ರ ಆರೋಪಿಯಾಗಿದ್ದಾರೆ.</p>.<p>ಈ ಪ್ರಕರಣದಲ್ಲಿ ರಂಜಿತ್ ಚಂದ್ರ ಅವರು ದೋಷಿ ಎಂದು ಸಾಬೀತಾದರೆ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಗಪುರ</strong>: ಎರಡು ವಿಮಾ ಕಂಪನಿಗಳಿಗೆ ವಂಚಿಸಿದ ಆರೋಪದಲ್ಲಿ ಭಾರತೀಯ ಸಂಜಾತ ವ್ಯಕ್ತಿಯ ವಿರುದ್ಧ ಇಲ್ಲಿನ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.</p>.<p>ಸಹಾ ರಂಜಿತ್ ಚಂದ್ರ (48) ಎಂಬುವವರು ಇಬ್ಬರು ವಿದೇಶಿ ಕಾರ್ಮಿಕರಿಗೆ ಅಂದಾಜು ₹47.30 ಲಕ್ಷ ವಿಮಾ ಹಣ ವಿತರಿಸುವ ಸಂಬಂಧ ಎರಡು ವಿಮಾ ಕಂಪನಿಗಳಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.</p>.<p>ಇಬ್ಬರು ಗಾಯಾಳು ಕಾರ್ಮಿಕರಿಗೆ ವಿಮಾ ಪರಿಹಾರ ನೀಡುವ ವಿಚಾರವಾಗಿ ವೈಟ್ಫೀಲ್ಡ್ ಲಾ ಕಾರ್ಪೊರೇಶನ್ನ ಅಧಿಕೃತ ವ್ಯಕ್ತಿಯ ಜೊತೆ ಮಾತುಕತೆ ನಡೆಸುವುದಾಗಿ ನಂಬಿಸಿ ಇವರು ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ಹಲವು ಕಂಪನಿಗಳ ನಿರ್ದೇಶಕರಾಗಿರುವ ರಂಜಿತ್ ಚಂದ್ರ ಅವರು 2020 ಜುಲೈ ಮತ್ತು ಫೆಬ್ರುವರಿ 2021ರ ನಡುವೆ ವೈಟ್ಫೀಲ್ಡ್ ಲಾ ಕಾರ್ಪೊರೇಶನ್ನ ಆಗಿನ ನಿರ್ದೇಶಕರಾಗಿದ್ದ ವಕೀಲ ಚಾರ್ಲ್ಸ್ ಯೋ ಯಾವೊ ಹುಯಿ ಎಂಬುವವರ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.</p>.<p>ಚಾರ್ಲ್ಸ್ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಅವರ ವಿರುದ್ಧ 2022 ಆಗಸ್ಟ್ನಲ್ಲಿ ಬಂಧನ ವಾರಂಟ್ ಹೊರಡಿಸಲಾಗಿತ್ತು.</p>.<p>ಸರ್ಕಾರಿ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲೂ ರಂಜಿತ್ ಚಂದ್ರ ಆರೋಪಿಯಾಗಿದ್ದಾರೆ.</p>.<p>ಈ ಪ್ರಕರಣದಲ್ಲಿ ರಂಜಿತ್ ಚಂದ್ರ ಅವರು ದೋಷಿ ಎಂದು ಸಾಬೀತಾದರೆ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>