‘ನಮ್ಮ ಸಂಸ್ಕೃತಿಯಲ್ಲೇ ಸಹಿಷ್ಣುತೆ ಅಡಗಿದೆ. ಇನ್ನೊಬ್ಬರ ಆತಂಕ, ನೋವು–ನಲಿವುಗಳನ್ನು ಆಲಿಸುವ ಗುಣಧರ್ಮ ನಮ್ಮಲ್ಲಿದೆ. ಆದರೆ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತದಲ್ಲಿ ನಡೆದಿರುವ ಘಟನೆಗಳು ನೋವುಂಟು ಮಾಡುತ್ತವೆ. ಸಮುದಾಯಗಳ ವಿಭಜನೆ, ಅಸಹಿಷ್ಣುತೆ ಹಾಗೂ ಜನರಲ್ಲಿನ ಅಸಮಾಧಾನವನ್ನು ನೋಡಿದ್ದೇವೆ. ಅಧಿಕಾರದಲ್ಲಿರುವವರ ಮಾನಸಿಕ ಸ್ಥಿತಿಯಿಂದ ಇಂತಹ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿದೆ’ ಎಂದು ಕಿಡಿಕಾರಿದರು.