ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿಇಥಿಯೋಪಿಯಾ ಕುರಿತು ಮಾಹಿತಿ ಹಂಚಿಕೊಳ್ಳುವ ವೇಳೆ, ಕಾಬೂಲ್ನಲ್ಲಿ ನಡೆದಿರುವ ದಾಳಿ ಬಗ್ಗೆ ತಿರುಮೂರ್ತಿ ಪ್ರಸ್ತಾಪಿಸಿದರು. ‘ಈ ಘಟನೆ, ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುವವರ ವಿರುದ್ಧ ಜಗತ್ತು ಒಗ್ಗಟ್ಟಾಗಿ ನಿಲ್ಲುವ ಅಗತ್ಯವನ್ನು ಮತ್ತಷ್ಟು ಒತ್ತಿ ಹೇಳುತ್ತಿದೆ‘ ಎಂದು ಅವರು ಪ್ರತಿಪಾದಿಸಿದರು.