ಕುವೈತ್ ಸಿಟಿ: ಪ್ರವಾದಿ ಮಹಮ್ಮದ್ ಅವರ ಅವಹೇಳನವನ್ನು ಖಂಡಿಸಿ ಶುಕ್ರವಾರದ ಪ್ರಾರ್ಥನೆಯ ನಂತರ ಫಹಾಹೀಲ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಲಸಿಗರನ್ನು ಕುವೈತ್ನಿಂದ ಗಡಿಪಾರು ಮಾಡಲಾಗುವುದು.ದೇಶದ ಕಾನೂನನ್ನು ಉಲ್ಲಂಘಿಸಿ ಧರಣಿ ನಡೆಸಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.
ವಲಸಿಗರು ಪ್ರತಿಭಟನೆಗಳನ್ನು ನಡೆಸಬಾರದು ಎಂಬ ಷರತ್ತು ಹೊಂದಿರುವ ದೇಶದ ಕಾನೂನನ್ನು ಉಲ್ಲಂಘಿಸಿದ ಕಾರಣ, ಅವರನ್ನು (ವಲಸಿಗರನ್ನು) ಕುವೈತ್ನಿಂತ ಗಡಿಪಾರು ಮಾಡಲಾಗುವುದು ಎಂದು ಮೂಲಗಳು ತಿಳಿಸಿರುವುದಾಗಿ 'ಅರಬ್ ಟೈಮ್ಸ್' ವರದಿ ವರದಿ ಮಾಡಿದೆ.
ಸರ್ಕಾರದ ಸೂಚನೆಯನ್ನು ಧಿಕ್ಕರಿಸಿ ಪ್ರತಿಭಟನೆ ಆಯೋಜಿಸಿದ ಫಹಹೀಲ್ ಪ್ರದೇಶದಲ್ಲಿನ ವಲಸಿಗರನ್ನು ಬಂಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಪ್ರತಿಭಟನೆಯಲ್ಲಿ ನಿರತರಾಗಿದ್ದವರನ್ನು ಪತ್ತೆಹಚ್ಚಲಾಗುತ್ತಿದೆ. ಬಳಿಕ ಅವರನ್ನು ಅವರವರ ದೇಶಕ್ಕೇ ಕಳುಹಿಸಲು ಗಡಿಪಾರು ಕೇಂದ್ರಕ್ಕೆ ಕಳುಹಿಸಲಾಗುವುದು. ಗಡಿಪಾರು ಆದವರು ಮತ್ತೆ ದೇಶಕ್ಕೆ ಪ್ರವೇಶಿಸದಂತೆ ನಿಷೇಧಿಸಲಾಗುವುದು ಎಂದು 'ಆಲ್ ರಾಯ್' ಪತ್ರಿಕೆ ವರದಿ ಮಾಡಿದೆ.
ಕುವೈತ್ನಲ್ಲಿರುವ ಎಲ್ಲ ವಲಸಿಗರು ದೇಶದ ಕಾನೂನುಗಳನ್ನು ಗೌರವಿಸಬೇಕು. ಯಾವುದೇ ರೀತಿಯ ಪ್ರತಿಭಟನೆಗಳನ್ನು ನಡೆಸುವಂತಿಲ್ಲ ಎಂಬ ಸೂಚನೆಗಳಿವೆ.
ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದಾಗಿ ಭಾರತಈಗಾಗಲೇ ಕುವೈತ್ಗೆ ತಿಳಿಸಿದೆ.
ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ರಾಷ್ಟ್ರೀಯ ವಕ್ತಾರೆ ಸ್ಥಾನದಿಂದ ಬಿಜೆಪಿ ವಜಾ ಮಾಡಿದೆ.ಹೇಳಿಕೆ ಸಂಬಂಧ ಗುಜರಾತ್ ಹಾಗೂ ಮಹಾರಾಷ್ಟ್ರದ ಥಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 298, 294, 153ಎ ಮತ್ತು 505ಬಿ ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಇತರ ಅಪರಾಧಗಳ ಆರೋಪದಡಿಯಲ್ಲಿ ದೂರು ದಾಖಲಾಗಿದೆ.
Indians in Kuwait who protested against Nupur Sharma are now being deported back to India and visa cancelled permanently.
— Renee ❀ (@lifeisgucci5) June 12, 2022
Kuwait buying 192 tonne Cowdung from India
— Scar Sir (@Scar3rd) June 12, 2022
Kuwait deporting Indian Mslims who protested against Nupur Sharma there
Finally Kuwait has understood that even Cowdung is more useful than Indian Ms
ಇದನ್ನೂ ಓದಿ:ಪ್ರವಾದಿ ಅವಹೇಳನ: ನಿಲ್ಲದ ಪ್ರತಿಭಟನೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.