ಸದ್ಯದ ಮಾಹಿತಿಯಂತೆ ಏಳು ಮಂದಿ ಕಾಣೆಯಾಗಿದ್ದು ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉಳಿದ ಐದು ಮಂದಿ ಕಾಣೆಯಾಗಿದ್ದಾರೆ ಎನ್ನಲಾಗಿದೆ.ನೆಲಮಂಗಲ ವ್ಯಾಪ್ತಿಯ ಪುಟ್ಟರಾಜು, ಲಕ್ಷ್ಮಿನಾರಾಯಣ, ಶಿವಣ್ಣ, ಹನುಮಂತರಾಯಪ್ಪ, ಅಡಕಮಾರನಹಳ್ಳಿಯ ಮಾರೇಗೌಡ, ವಿದ್ಯಾರಣ್ಯಪುರದ ರಂಗಪ್ಪ, ರಮೇಶ್ ಗೌಡ ಪ್ರವಾಸಕ್ಕೆ ತೆರಳಿದ್ದಪ್ರಮುಖರು.ಇವರಲ್ಲಿ ಲಕ್ಷ್ಮಿನಾರಾಯಣ ಹಾಗೂ ಶಿವಣ್ಣ ಎಂಬುವವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಇವರ ಶವಗಳನ್ನು ತರಲು ಶ್ರೀಲಂಕಾ ಸರ್ಕಾರದ ಜೊತೆ ಸಂಪರ್ಕದಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.