<p><strong>ಯಾಂಗೋನ್:</strong> ಮ್ಯಾನ್ಮಾರ್ನಲ್ಲಿ ಐದು ವರ್ಷಗಳ ಬಳಿಕ ಸೇನೆಯ ಉಸ್ತುವಾರಿಯಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನವು ಭಾನುವಾರ ನಡೆಯಿತು. </p>.<p>ಇನ್ನೂ ಎರಡು ಹಂತದ ಮತದಾನಗಳ ಬಾಕಿ ಇದ್ದು, ಇದು ಜನವರಿಯಲ್ಲಿ ಪೂರ್ಣಗೊಳ್ಳಲಿದೆ.</p>.<p>ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಚುನಾವಣೆ ನಡೆಸುತ್ತಿದ್ದೇವೆ ಎಂದು ಸೇನೆ ಹೇಳಿದೆ. ಆದರೆ ಚುನಾವಣೆಗೂ ಮುನ್ನ ಪ್ರಮುಖ ವಿರೋಧಪಕ್ಷಗಳನ್ನು ನಿಷೇಧಿಸಲಾಗಿದೆ. ಮತದಾನ ಬಹಿಷ್ಕರಿಸಿದವರಿಂದ ಬಲವಂತವಾಗಿ ಮತ ಹಾಕಿಸಲಾಗುತ್ತಿದೆ ಎಂದು ವರದಿಯಾಗಿದೆ. ಹೀಗಾಗಿ ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಯುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.</p>.<p>ರಾಷ್ಟ್ರೀಯ ಮತ್ತು ಪ್ರಾದೇಶಿಕ ಶಾಸಕಾಂಗ ಸ್ಥಾನಗಳಿಗೆ 57 ಪಕ್ಷಗಳಿಂದ ಒಟ್ಟು 4,800ಕ್ಕೂ ಅಧಿಕ ಮಂದಿ ಸ್ಪರ್ಧಿಸಿದ್ದಾರೆ. ಆದರೆ ದೇಶದಾದ್ಯಂತ 6 ಪಕ್ಷಗಳು ಮಾತ್ರ ಸ್ಪರ್ಧೆ ನಡೆಸುತ್ತಿದ್ದಾವೆ.</p>.<p>2021ರಲ್ಲಿ ಚುನಾಯಿತ ಸರ್ಕಾರವನ್ನು ರದ್ದುಮಾಡಿ ಸೇನೆಯು ಅಧಿಕಾರವಹಿಸಿಕೊಂಡಿತ್ತು. ಈ ಬಗ್ಗೆ ತೀವ್ರ ಜನವಿರೋಧ ವ್ಯಕ್ತವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾಂಗೋನ್:</strong> ಮ್ಯಾನ್ಮಾರ್ನಲ್ಲಿ ಐದು ವರ್ಷಗಳ ಬಳಿಕ ಸೇನೆಯ ಉಸ್ತುವಾರಿಯಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನವು ಭಾನುವಾರ ನಡೆಯಿತು. </p>.<p>ಇನ್ನೂ ಎರಡು ಹಂತದ ಮತದಾನಗಳ ಬಾಕಿ ಇದ್ದು, ಇದು ಜನವರಿಯಲ್ಲಿ ಪೂರ್ಣಗೊಳ್ಳಲಿದೆ.</p>.<p>ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಚುನಾವಣೆ ನಡೆಸುತ್ತಿದ್ದೇವೆ ಎಂದು ಸೇನೆ ಹೇಳಿದೆ. ಆದರೆ ಚುನಾವಣೆಗೂ ಮುನ್ನ ಪ್ರಮುಖ ವಿರೋಧಪಕ್ಷಗಳನ್ನು ನಿಷೇಧಿಸಲಾಗಿದೆ. ಮತದಾನ ಬಹಿಷ್ಕರಿಸಿದವರಿಂದ ಬಲವಂತವಾಗಿ ಮತ ಹಾಕಿಸಲಾಗುತ್ತಿದೆ ಎಂದು ವರದಿಯಾಗಿದೆ. ಹೀಗಾಗಿ ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಯುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.</p>.<p>ರಾಷ್ಟ್ರೀಯ ಮತ್ತು ಪ್ರಾದೇಶಿಕ ಶಾಸಕಾಂಗ ಸ್ಥಾನಗಳಿಗೆ 57 ಪಕ್ಷಗಳಿಂದ ಒಟ್ಟು 4,800ಕ್ಕೂ ಅಧಿಕ ಮಂದಿ ಸ್ಪರ್ಧಿಸಿದ್ದಾರೆ. ಆದರೆ ದೇಶದಾದ್ಯಂತ 6 ಪಕ್ಷಗಳು ಮಾತ್ರ ಸ್ಪರ್ಧೆ ನಡೆಸುತ್ತಿದ್ದಾವೆ.</p>.<p>2021ರಲ್ಲಿ ಚುನಾಯಿತ ಸರ್ಕಾರವನ್ನು ರದ್ದುಮಾಡಿ ಸೇನೆಯು ಅಧಿಕಾರವಹಿಸಿಕೊಂಡಿತ್ತು. ಈ ಬಗ್ಗೆ ತೀವ್ರ ಜನವಿರೋಧ ವ್ಯಕ್ತವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>