<p><strong>ಢಾಕಾ</strong>: ಬಾಂಗ್ಲಾದೇಶದಲ್ಲಿ ಹತ್ಯೆಯಾದ ವಿದ್ಯಾರ್ಥಿ ನಾಯಕ ಒಸ್ಮಾನ್ ಹಾದಿ ಅವರ ಅಣ್ಣನನ್ನು ಬ್ರಿಟನ್ನ ಬಾಂಗ್ಲಾದೇಶದ ರಾಜತಾಂತ್ರಿಕ ಮಿಷನ್ನ 2ನೇ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.</p><p>ಇನ್ಕ್ವಿಲಾಬ್ ಮೊಂಚೊ ಸಂಘಟನೆ ವಕ್ತಾರರಾಗಿದ್ದ 32 ವರ್ಷದ ಒಸ್ಮಾನ್ ಅವರನ್ನು ಡಿಸೆಂಬರ್ 12ರಂದು ಢಾಕಾದಲ್ಲಿ ಚುನಾವಣಾ ಪ್ರಚಾರದ ವೇಳೆ ತಲೆಗೆ ಗುಂಡಿಕ್ಕಲಾಗಿತ್ತು. ಉನ್ನತ ಚಿಕಿತ್ಸೆಗಾಗಿ ವಿಮಾನದ ಮೂಲಕ ಸಿಂಗಪುರಕ್ಕೆ ಕರೆದೊಯ್ಯಲಾಗಿತ್ತು. 6 ದಿನಗಳ ಬಳಿಕ ಆತ ಮೃತಪಟ್ಟಿದ್ದ.</p><p>ಒಸ್ಮಾನ್ ಹತ್ಯೆ ಬಳಿಕ ಢಾಕಾದಲ್ಲಿ ಪ್ರತಿಭಟನೆಗಳು, ಗುಂಪು ಘರ್ಷಣೆ ನಡೆದವು. ಪ್ರಸಿದ್ಧ ದಿನಪತ್ರಿಕೆಗಳು ಮತ್ತು ಪ್ರಗತಿಪರ ಸಾಂಸ್ಕೃತಿಕ ಸಂಘಟನೆಗಳ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿತ್ತು.</p><p>ಒಸ್ಮಾನ್ ಹಾದಿಯ ಅಣ್ಣ ಒಮರ್ ಬಿನ್ ಹಾದಿಯವರನ್ನು ಬರ್ಮಿಂಗ್ಹ್ಯಾಮ್ನಲ್ಲಿರುವ ಬಾಂಗ್ಲಾದೇಶದ ಸಹಾಯಕ ಹೈಕಮಿಷನ್ನ ಎರಡನೇ ಕಾರ್ಯದರ್ಶಿಯಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ ಎಂದು ಡೈಲಿ ಸ್ಟಾರ್ ದಿನಪತ್ರಿಕೆ ವರದಿಮಾಡಿದೆ.</p><p>ಒಮರ್ ಅವಧಿಯು ನೇಮಕದ ದಿನದಿಂದ ಮೂರು ವರ್ಷಗಳವರೆಗೆ ಇರುತ್ತದೆ. </p><p>'ಯಾವುದೇ ಹುದ್ದೆ, ಉದ್ಯಮ, ಖಾಸಗಿ ಸಂಘಟನೆ, ಸರ್ಕಾರದೊಂದಿಗೆ ವೃತ್ತಿಪರ ನಂಟು ಕಡಿದುಕೊಳ್ಳುವ ಷರತ್ತಿನ ಮೇಲೆ ಈ ನೇಮಕಾತಿ ಮಾಡಲಾಗಿದೆ. ನೇಮಕಾತಿಯ ಇತರ ನಿಯಮಗಳನ್ನು ಒಪ್ಪಂದದಿಂದ ನಿರ್ಧರಿಸಲಾಗುತ್ತದೆ'ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.</p><p>ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ</strong>: ಬಾಂಗ್ಲಾದೇಶದಲ್ಲಿ ಹತ್ಯೆಯಾದ ವಿದ್ಯಾರ್ಥಿ ನಾಯಕ ಒಸ್ಮಾನ್ ಹಾದಿ ಅವರ ಅಣ್ಣನನ್ನು ಬ್ರಿಟನ್ನ ಬಾಂಗ್ಲಾದೇಶದ ರಾಜತಾಂತ್ರಿಕ ಮಿಷನ್ನ 2ನೇ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.</p><p>ಇನ್ಕ್ವಿಲಾಬ್ ಮೊಂಚೊ ಸಂಘಟನೆ ವಕ್ತಾರರಾಗಿದ್ದ 32 ವರ್ಷದ ಒಸ್ಮಾನ್ ಅವರನ್ನು ಡಿಸೆಂಬರ್ 12ರಂದು ಢಾಕಾದಲ್ಲಿ ಚುನಾವಣಾ ಪ್ರಚಾರದ ವೇಳೆ ತಲೆಗೆ ಗುಂಡಿಕ್ಕಲಾಗಿತ್ತು. ಉನ್ನತ ಚಿಕಿತ್ಸೆಗಾಗಿ ವಿಮಾನದ ಮೂಲಕ ಸಿಂಗಪುರಕ್ಕೆ ಕರೆದೊಯ್ಯಲಾಗಿತ್ತು. 6 ದಿನಗಳ ಬಳಿಕ ಆತ ಮೃತಪಟ್ಟಿದ್ದ.</p><p>ಒಸ್ಮಾನ್ ಹತ್ಯೆ ಬಳಿಕ ಢಾಕಾದಲ್ಲಿ ಪ್ರತಿಭಟನೆಗಳು, ಗುಂಪು ಘರ್ಷಣೆ ನಡೆದವು. ಪ್ರಸಿದ್ಧ ದಿನಪತ್ರಿಕೆಗಳು ಮತ್ತು ಪ್ರಗತಿಪರ ಸಾಂಸ್ಕೃತಿಕ ಸಂಘಟನೆಗಳ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿತ್ತು.</p><p>ಒಸ್ಮಾನ್ ಹಾದಿಯ ಅಣ್ಣ ಒಮರ್ ಬಿನ್ ಹಾದಿಯವರನ್ನು ಬರ್ಮಿಂಗ್ಹ್ಯಾಮ್ನಲ್ಲಿರುವ ಬಾಂಗ್ಲಾದೇಶದ ಸಹಾಯಕ ಹೈಕಮಿಷನ್ನ ಎರಡನೇ ಕಾರ್ಯದರ್ಶಿಯಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ ಎಂದು ಡೈಲಿ ಸ್ಟಾರ್ ದಿನಪತ್ರಿಕೆ ವರದಿಮಾಡಿದೆ.</p><p>ಒಮರ್ ಅವಧಿಯು ನೇಮಕದ ದಿನದಿಂದ ಮೂರು ವರ್ಷಗಳವರೆಗೆ ಇರುತ್ತದೆ. </p><p>'ಯಾವುದೇ ಹುದ್ದೆ, ಉದ್ಯಮ, ಖಾಸಗಿ ಸಂಘಟನೆ, ಸರ್ಕಾರದೊಂದಿಗೆ ವೃತ್ತಿಪರ ನಂಟು ಕಡಿದುಕೊಳ್ಳುವ ಷರತ್ತಿನ ಮೇಲೆ ಈ ನೇಮಕಾತಿ ಮಾಡಲಾಗಿದೆ. ನೇಮಕಾತಿಯ ಇತರ ನಿಯಮಗಳನ್ನು ಒಪ್ಪಂದದಿಂದ ನಿರ್ಧರಿಸಲಾಗುತ್ತದೆ'ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.</p><p>ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>