‘ಈ ಸರ್ಕಾರವು ಅಧಿಕಾರದಿಂದ ನಿರ್ಗಮಿಸಬೇಕೆಂದು ಒತ್ತಾಯಿಸಿ ದೇಶದ ಶ್ರೀಮಂತರು, ರೈತರು, ಸಾರ್ವಜನಿಕ ಸೇವಕರು ಬೀದಿಗಿಳಿದಿದ್ದಾರೆ. ಅವರಂತೆ ನಾನು ಕೂಡ ಬೀದಿಗಿಳಿದಿದ್ದೇನೆ. ಹೊಸ ಸರ್ಕಾರವನ್ನು ರಚಿಸಲು ನಾನು ಬಯಸುತ್ತೇನೆ. ಈ ಕಾರಣಕ್ಕಾಗಿ ಶ್ರೀಲಂಕಾದಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕು’ ಎಂದು ಸಿರಿಸೇನಾ ಹೇಳಿದ್ದಾರೆ.