ಭಾರಿ ಗಾಳಿಯಿಂದ ಮನೆಗಳ ಚಾವಣಿಗಳು ಹಾರಿದ್ದು, ಹಲವೆಡೆ ಮರಗಳು ಉರುಳಿ ದಕ್ಷಿಣ ಮತ್ತು ಮಧ್ಯ ದ್ವೀಪ ಪ್ರಾಂತ್ಯಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಹೋಟೆಲ್, ವಿಮಾನ ನಿಲ್ದಾಣವೊಂದರ ಕಟ್ಟಡಗಳು ಹಾನಿಗೊಂಡಿವೆ. ಚಂಡಮಾರುತವು ಅಪ್ಪಳಿಸುವ ಮುನ್ನೆಚ್ಚರಿಕೆಯಿಂದ 3 ಲಕ್ಷಕ್ಕೂ ಹೆಚ್ಚು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.