<p><strong>ವಿಶ್ವಸಂಸ್ಥೆ</strong>: ಅಫ್ಗಾನಿಸ್ತಾನ ಸರ್ಕಾರ ಹಾಗೂ ತಾಲಿಬಾನ್ ನಡುವೆ ಈ ವಾರ ದೋಹಾದಲ್ಲಿ ನಡೆಯಲಿರುವ ಮಾತುಕತೆ ಆ ದೇಶದಲ್ಲಿನ ಸಂಘರ್ಷವನ್ನು ಶಮನ ಮಾಡಲಿದೆ ಎಂಬ ವಿಶ್ವಾಸವನ್ನು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ವ್ಯಕ್ತಪಡಿಸಿದ್ದಾರೆ.</p>.<p>ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಗುಟೆರಸ್ ಅವರ ವಕ್ತಾರ ಸ್ಟೀಫನ್ ದುಜಾರಿಕ್, ‘ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳ ಬಗ್ಗೆ ಗುಟೆರಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಪ್ರಯತ್ನಕ್ಕೆ ಜಾಗತಿಕ ನಾಯಕರು ಕೈಜೋಡಿಸಬೇಕು’ ಎಂದರು.</p>.<p>‘ಹೇರತ್ ಹಾಗೂ ಕಂದಹಾರ್ಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಇದರೊಂದಿಗೆ ಸಣ್ಣ ನಗರಗಳು ಹಾಗೂ ಪಟ್ಟಣ ಪ್ರದೇಶಗಳಿಗೂ ಸಂಘರ್ಷ ವ್ಯಾಪಿಸುತ್ತಿರುವುದು ಕಳವಳಕಾರಿ. ಈ ಬೆಳವಣಿಗೆಯಿಂದಾಗಿ ನಾಗರಿಕರು ಹೆಚ್ಚು ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.</p>.<p>‘ಕಾಬೂಲ್ ನಗರವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಸಂಘರ್ಷ ತೀವ್ರವಾಗುವ ಆತಂಕವಿದೆ’ ಎಂದೂ ಹೇಳಿದರು.</p>.<p><strong>ಇವನ್ನೂ ಓದಿ</strong><br />*<a href="https://cms.prajavani.net/world-news/afghan-government-qatar-taliban-power-sharing-deal-857129.html" itemprop="url">ತಾಲಿಬಾನ್ನೊಂದಿಗೆ ಅಧಿಕಾರ ಹಂಚಿಕೆಗೆ ಮುಂದಾದ ಅಫ್ಗಾನಿಸ್ತಾನ ಸರ್ಕಾರ </a><br />*<a href="https://cms.prajavani.net/world-news/taliban-claim-to-capture-kandahar-afghanistan-second-largest-city-857312.html" itemprop="url">ಅಫ್ಗಾನಿಸ್ತಾನ: ಕಂದಹಾರ್ ನಗರ ತಾಲಿಬಾನ್ ವಶಕ್ಕೆ</a><br />*<a href="https://cms.prajavani.net/world-news/ghazni-province-held-by-taliban-857281.html" itemprop="url">ಘಜ್ನಿ ಪ್ರಾಂತ್ಯ ತಾಲಿಬಾನ್ ವಶ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ</strong>: ಅಫ್ಗಾನಿಸ್ತಾನ ಸರ್ಕಾರ ಹಾಗೂ ತಾಲಿಬಾನ್ ನಡುವೆ ಈ ವಾರ ದೋಹಾದಲ್ಲಿ ನಡೆಯಲಿರುವ ಮಾತುಕತೆ ಆ ದೇಶದಲ್ಲಿನ ಸಂಘರ್ಷವನ್ನು ಶಮನ ಮಾಡಲಿದೆ ಎಂಬ ವಿಶ್ವಾಸವನ್ನು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ವ್ಯಕ್ತಪಡಿಸಿದ್ದಾರೆ.</p>.<p>ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಗುಟೆರಸ್ ಅವರ ವಕ್ತಾರ ಸ್ಟೀಫನ್ ದುಜಾರಿಕ್, ‘ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳ ಬಗ್ಗೆ ಗುಟೆರಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಪ್ರಯತ್ನಕ್ಕೆ ಜಾಗತಿಕ ನಾಯಕರು ಕೈಜೋಡಿಸಬೇಕು’ ಎಂದರು.</p>.<p>‘ಹೇರತ್ ಹಾಗೂ ಕಂದಹಾರ್ಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಇದರೊಂದಿಗೆ ಸಣ್ಣ ನಗರಗಳು ಹಾಗೂ ಪಟ್ಟಣ ಪ್ರದೇಶಗಳಿಗೂ ಸಂಘರ್ಷ ವ್ಯಾಪಿಸುತ್ತಿರುವುದು ಕಳವಳಕಾರಿ. ಈ ಬೆಳವಣಿಗೆಯಿಂದಾಗಿ ನಾಗರಿಕರು ಹೆಚ್ಚು ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.</p>.<p>‘ಕಾಬೂಲ್ ನಗರವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಸಂಘರ್ಷ ತೀವ್ರವಾಗುವ ಆತಂಕವಿದೆ’ ಎಂದೂ ಹೇಳಿದರು.</p>.<p><strong>ಇವನ್ನೂ ಓದಿ</strong><br />*<a href="https://cms.prajavani.net/world-news/afghan-government-qatar-taliban-power-sharing-deal-857129.html" itemprop="url">ತಾಲಿಬಾನ್ನೊಂದಿಗೆ ಅಧಿಕಾರ ಹಂಚಿಕೆಗೆ ಮುಂದಾದ ಅಫ್ಗಾನಿಸ್ತಾನ ಸರ್ಕಾರ </a><br />*<a href="https://cms.prajavani.net/world-news/taliban-claim-to-capture-kandahar-afghanistan-second-largest-city-857312.html" itemprop="url">ಅಫ್ಗಾನಿಸ್ತಾನ: ಕಂದಹಾರ್ ನಗರ ತಾಲಿಬಾನ್ ವಶಕ್ಕೆ</a><br />*<a href="https://cms.prajavani.net/world-news/ghazni-province-held-by-taliban-857281.html" itemprop="url">ಘಜ್ನಿ ಪ್ರಾಂತ್ಯ ತಾಲಿಬಾನ್ ವಶ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>