ಸೇನಾಡಳಿತ ವಿರುದ್ಧದ ದಂಗೆಯನ್ನು ಹತ್ತಿಕ್ಕಲು ಸರ್ಕಾರವು ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದೆ. 2021ರಲ್ಲಿ ಸೇನಾಡಳಿತ ಸ್ಥಾಪನೆಯಾದಾಗಿನಿಂದ ಈವರೆಗೆ ದೇಶದಲ್ಲಿ ನಡೆಸಲಾದ 1,652 ವೈಮಾನಿಕ ದಾಳಿಯಲ್ಲಿ 936 ಮಂದಿ ಸಾವಿಗೀಡಾಗಿದ್ದಾರೆ, 838 ಮಂದಿ ಗಾಯಗೊಂಡಿದ್ದಾರೆ. ಜೊತೆಗೆ 137 ಧಾರ್ಮಿಕ ಕಟ್ಟಡಗಳು, 76 ಶಾಲೆಗಳು ಮತ್ತು 28 ಆಸ್ಪತ್ರೆಗಳು ಹಾನಿಗೊಳಗಾಗಿವೆ ಎಂದು ವರದಿಯೊಂದು ತಿಳಿಸಿದೆ.