ಸಭೆಯಲ್ಲಿ ಭಾರತವು ತನ್ನ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳಾದ ಆಹಾರ ಭದ್ರತೆಗಾಗಿ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (ಎಂಎಸ್ಪಿ) ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು, ಕೃಷಿ ಸುಧಾರಣೆಗಳು, ಮೀನುಗಾರಿಕೆಗೆ ಸಹಾಯಧನ, ಇಕಾಮರ್ಸ್ ಮೇಲಿರುವ ಆಮದು ಸುಂಕಗಳ ನಿಷೇಧ, ವಿವಾದ ಇತ್ಯರ್ಥ ಮತ್ತು ಡಬ್ಲ್ಯುಟಿಒ ಸುಧಾರಣೆಗಳ ಬಗ್ಗೆ ಚರ್ಚೆ ನಡೆಸಲಿದೆ.