<p><strong>ಕಠ್ಮಂಡು (ಪಿಟಿಐ):</strong> ಭೂಕಂಪದಿಂದ ಚೇತರಿಸಿಕೊಳ್ಳುತ್ತಿರುವ ನೇಪಾಳದಲ್ಲಿ ಅಪಾಯದಿಂದ ಪಾರಾದವರ ಕಥೆಗಳು ಕೇಳಿಬರುತ್ತಲೇ ಇವೆ.<br /> <br /> ಭೂಕಂಪವಾದ ಆರು ದಿನಗಳ ನಂತರವೂ ಬದುಕಿದ್ದ ಪೆಂಬಾ ಲಾಮಾ ಎಂಬ 15 ವರ್ಷದ ಬಾಲಕನನ್ನು ಗುರುವಾರ ಏಳು ಮಹಡಿ ಕಟ್ಟಡವೊಂದರ ಅವಶೇಷಗಳ ಅಡಿಯಿಂದ ಪರಿಹಾರ ಕಾರ್ಯಕರ್ತರು ರಕ್ಷಿಸಿದ್ದಾರೆ.<br /> <br /> ಆತನಿಗೆ ಪೈಪ್ ಮೂಲಕ ಔಷಧ ನೀಡಲಾಗುತ್ತಿದೆ ಎಂದು ಪರಿಹಾರ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.<br /> ಕಟ್ಟಡಗಳ ಅವಶೇಷಗಳ ಅಡಿ ಇನ್ನೂ ನೂರಾರು ಜನ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಂದಾಜು ಮಾಡಲಾಗಿದೆ.<br /> <br /> <strong>ಎಂಟು ಸಾವಿರ ಟೆಂಟ್ಗಳು- ನವದೆಹಲಿ ವರದಿ: </strong>ಧಾರಾಕಾರ ಮಳೆ ಹಾಗೂ ಬಿಸಿಲಿನಿಂದ ತತ್ತರಿಸಿರುವ ಭೂಕಂಪ ಸಂತ್ರಸ್ತರಿಗಾಗಿ ಭಾರತ ನೇಪಾಳಕ್ಕೆ 8,450 ಟೆಂಟ್ಗಳನ್ನು ಕಳುಹಿಸಿದೆ.<br /> <br /> 750 ಟೆಂಟ್ಗಳನ್ನು ತುರ್ತಾಗಿ ವಿಮಾನದ ಮೂಲಕ ಕಳುಹಿಸಲಾಗಿದೆ. ಇನ್ನುಳಿದವುಗಳನ್ನು ರಸ್ತೆ ಮೂಲಕ ಸಾಗಿಸಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ.<br /> <br /> <strong>ಷರೀಫ್ ಕರೆ</strong><br /> ಇತ್ತೀಚಿನ ಭೂಕಂಪದಿಂದ ಭಾರತದಲ್ಲಿ ಆದ ಪ್ರಾಣಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಲು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಕರೆ ಮಾಡಿದ್ದರು.<br /> <br /> ‘ಪ್ರಧಾನಿ ಷರೀಫ್ ಕರೆ ಮಾಡಿದ್ದರು. ಭೂಕಂಪದಿಂದ ಭಾರತದಲ್ಲಿ ಆದ ಹಾನಿಯ ಕುರಿತು ಕಳಕಳಿ ವ್ಯಕ್ತಪಡಿಸಿದರು’ ಎಂದು ಮೋದಿ ಟ್ವಿಟರ್ನಲ್ಲಿ ಬರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು (ಪಿಟಿಐ):</strong> ಭೂಕಂಪದಿಂದ ಚೇತರಿಸಿಕೊಳ್ಳುತ್ತಿರುವ ನೇಪಾಳದಲ್ಲಿ ಅಪಾಯದಿಂದ ಪಾರಾದವರ ಕಥೆಗಳು ಕೇಳಿಬರುತ್ತಲೇ ಇವೆ.<br /> <br /> ಭೂಕಂಪವಾದ ಆರು ದಿನಗಳ ನಂತರವೂ ಬದುಕಿದ್ದ ಪೆಂಬಾ ಲಾಮಾ ಎಂಬ 15 ವರ್ಷದ ಬಾಲಕನನ್ನು ಗುರುವಾರ ಏಳು ಮಹಡಿ ಕಟ್ಟಡವೊಂದರ ಅವಶೇಷಗಳ ಅಡಿಯಿಂದ ಪರಿಹಾರ ಕಾರ್ಯಕರ್ತರು ರಕ್ಷಿಸಿದ್ದಾರೆ.<br /> <br /> ಆತನಿಗೆ ಪೈಪ್ ಮೂಲಕ ಔಷಧ ನೀಡಲಾಗುತ್ತಿದೆ ಎಂದು ಪರಿಹಾರ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.<br /> ಕಟ್ಟಡಗಳ ಅವಶೇಷಗಳ ಅಡಿ ಇನ್ನೂ ನೂರಾರು ಜನ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಂದಾಜು ಮಾಡಲಾಗಿದೆ.<br /> <br /> <strong>ಎಂಟು ಸಾವಿರ ಟೆಂಟ್ಗಳು- ನವದೆಹಲಿ ವರದಿ: </strong>ಧಾರಾಕಾರ ಮಳೆ ಹಾಗೂ ಬಿಸಿಲಿನಿಂದ ತತ್ತರಿಸಿರುವ ಭೂಕಂಪ ಸಂತ್ರಸ್ತರಿಗಾಗಿ ಭಾರತ ನೇಪಾಳಕ್ಕೆ 8,450 ಟೆಂಟ್ಗಳನ್ನು ಕಳುಹಿಸಿದೆ.<br /> <br /> 750 ಟೆಂಟ್ಗಳನ್ನು ತುರ್ತಾಗಿ ವಿಮಾನದ ಮೂಲಕ ಕಳುಹಿಸಲಾಗಿದೆ. ಇನ್ನುಳಿದವುಗಳನ್ನು ರಸ್ತೆ ಮೂಲಕ ಸಾಗಿಸಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ.<br /> <br /> <strong>ಷರೀಫ್ ಕರೆ</strong><br /> ಇತ್ತೀಚಿನ ಭೂಕಂಪದಿಂದ ಭಾರತದಲ್ಲಿ ಆದ ಪ್ರಾಣಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಲು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಕರೆ ಮಾಡಿದ್ದರು.<br /> <br /> ‘ಪ್ರಧಾನಿ ಷರೀಫ್ ಕರೆ ಮಾಡಿದ್ದರು. ಭೂಕಂಪದಿಂದ ಭಾರತದಲ್ಲಿ ಆದ ಹಾನಿಯ ಕುರಿತು ಕಳಕಳಿ ವ್ಯಕ್ತಪಡಿಸಿದರು’ ಎಂದು ಮೋದಿ ಟ್ವಿಟರ್ನಲ್ಲಿ ಬರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>