<p><strong>ಮೆಲ್ಬರ್ನ್: </strong>ಮತಗಟ್ಟೆ ಸಮೀಕ್ಷೆಗಳನ್ನು ಬುಡಮೇಲು ಮಾಡುವಂತಹ ಫಲಿತಾಂಶಕ್ಕೆ ಆಸ್ಟ್ರೇಲಿಯಾ ಸಾಕ್ಷಿಯಾಗಿದೆ. ಸಂಸತ್ಗೆ ಶನಿವಾರ ಚುನಾವಣೆ ಮುಕ್ತಾಯಗೊಂಡಿದ್ದು, ಅಧಿಕಾರರೂಢ ಲಿಬರಲ್ ಪಕ್ಷವೇ ಮತ್ತೆ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಸ್ಕಾಟ್ ಮಾರಿಸನ್ ಮತ್ತೆ ಪ್ರಧಾನಿ ಪಟ್ಟದತ್ತ ದಾಪುಗಾಲು ಇಟ್ಟಿದ್ದಾರೆ.</p>.<p>ಈವರೆಗೆ ಶೇ 70ರಷ್ಟು ಮತಗಳನ್ನು ಎಣಿಕೆ ನಡೆದಿದ್ದು, ಲಿಬರಲ್ ಪಾರ್ಟಿ ನೇತೃತ್ವದ ಮೈತ್ರಿಕೂಟ 82 ಸ್ಥಾನಗಳಲ್ಲಿ ಗೆಲುವು ಅಥವಾ ಮುನ್ನಡೆ ಸಾಧಿಸಿದೆ. ವಿರೋಧ ಪಕ್ಷ ಲೇಬರ್ ಪಾರ್ಟಿ ಕೇವಲ 66 ಸ್ಥಾನಗಳಲ್ಲಿ ಮುನ್ನಡೆ ಅಥವಾ ಗೆಲುವು ಸಾಧಿಸಿದೆ.</p>.<p>ಆದರೂ, ಲಿಬರಲ್ ಪಕ್ಷ ಭಾರಿ ಬಹುಮತದಿಂದ ಗೆಲುವು ಸಾಧಿಸಲಿದೆಯೋ ಅಥವಾ ಸರಳ ಬಹುಮತವನ್ನಷ್ಟೇ ಪಡೆಯಲಿದೆಯೋ ಎಂಬ ಬಗ್ಗೆ ಇನ್ನೂ ಅಂತಿಮ ಚಿತ್ರಣ ಸಿಕ್ಕಿಲ್ಲ.ಕಳೆದ ಎರಡು ವರ್ಷಗಳಿಂದಲೂ ಲೇಬರ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.</p>.<p>ಸ್ಕಾಟ್ ಮಾರಿಸನ್ ಸರ್ಕಾರದ ಸಂಪುಟದ ಸದಸ್ಯರು ಪ್ರಚಾರ ನಡೆಸುವ ವೇಳೆ ಭಾರಿ ವಿರೋಧ ಮತ್ತು ಟೀಕೆಗಳು ವ್ಯಕ್ತವಾಗಿದ್ದವು.</p>.<p class="Subhead"><strong>ಹವಾಮಾನ ಬದಲಾವಣೆ ಚರ್ಚೆ: </strong>ಸುದೀರ್ಘ ಐದು ವಾರ ದೇಶದಾದ್ಯಂತ ನಡೆದ ಚುನಾವಣಾ ಪ್ರಚಾರದ ಪರಿಣಾಮ 1.6 ಕೋಟಿ ಜನ ಮತ ಚಲಾಯಿಸಿದ್ದಾರೆ.ಪ್ರಧಾನಿ ಸ್ಕಾಟ್ ಮಾರಿಸನ್ ಸಿಡ್ನಿಯಲ್ಲಿ ಹಕ್ಕು ಚಲಾಯಿಸಿದರೆ, ಲೇಬರ್ ಪಕ್ಷದ ನಾಯಕ ಬಿಲ್ ಶಾರ್ಟನ್ ಮೆಲ್ಬರ್ನ್ನಲ್ಲಿ ಮತ ಹಾಕಿದರು.ಹವಾಮಾನ ಬದಲಾವಣೆ ವಿಷಯವೇ ಈ ಚುನಾವಣೆಯಲ್ಲಿ ಮುಖ್ಯ ವಿಷಯವಾಗಿತ್ತು.</p>.<p>‘ಹವಾಮಾನ ಬದಲಾವಣೆ ಸಮಸ್ಯೆ ತೀವ್ರತರವಾಗುತ್ತಿದೆ. ಯಾವುದೂ ಆಸ್ಟ್ರೇಲಿಯಾಕ್ಕೆ ಪೂರಕವಾಗಿ ಸಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮುಂದಿನ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ’ ಎಂದು ಶಾರ್ಟನ್ ಪ್ರತಿಪಾದಿಸುತ್ತಿದ್ದರು.</p>.<p>‘ಹವಾಮಾನ ವೈಪರೀತ್ಯ ಕುರಿತು ನಿರ್ಲಕ್ಷ್ಯ ವಹಿಸಿದ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶವಿದೆ. ಎರಡು ಪಕ್ಷಗಳ ನಡುವೆ ಈ ವಿಷಯವೇ ನಿಜವಾದ ವ್ಯತ್ಯಾಸವಾಗಿದೆ’ ಎಂದು ಹೇಳಿದ್ದಾರೆ.</p>.<p>ಆಸ್ಟ್ರೇಲಿಯಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಪ್ರದೇಶಗಳು ಕಾಳ್ಗಿಚ್ಚಿಗೆ ನಾಶವಾಗುತ್ತಿರುವುದು, ’ಗ್ರೇಟ್ ಬ್ಯಾರಿಯರ್ ರೀಫ್’ನಂತಹ ನೈಸರ್ಗಿಕ ತಾಣಗಳು ಬೆಂಕಿಗೆ ಆಹುತಿಯಾಗುತ್ತಿರುವುದು ಹವಾಮಾನ ವೈಪರೀತ್ಯದ ಪರಿಣಾಮ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.</p>.<p>ಹವಾಮಾನ ಬದಲಾವಣೆ ಪರಿಣಾಮ ನಿಯಂತ್ರಣವೇ ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಶೇಕಡ 64ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದರು. ಹೊರಸೂಸುವಿಕೆ ಪ್ರಮಾಣವನ್ನು ಶೇಕಡ 45ಕ್ಕೆ ಕಡಿತಗೊಳಿಸುವುದಾಗಿ ಲೇಬರ್ ಪಕ್ಷ ಭರವಸೆ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೆಲ್ಬರ್ನ್: </strong>ಮತಗಟ್ಟೆ ಸಮೀಕ್ಷೆಗಳನ್ನು ಬುಡಮೇಲು ಮಾಡುವಂತಹ ಫಲಿತಾಂಶಕ್ಕೆ ಆಸ್ಟ್ರೇಲಿಯಾ ಸಾಕ್ಷಿಯಾಗಿದೆ. ಸಂಸತ್ಗೆ ಶನಿವಾರ ಚುನಾವಣೆ ಮುಕ್ತಾಯಗೊಂಡಿದ್ದು, ಅಧಿಕಾರರೂಢ ಲಿಬರಲ್ ಪಕ್ಷವೇ ಮತ್ತೆ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಸ್ಕಾಟ್ ಮಾರಿಸನ್ ಮತ್ತೆ ಪ್ರಧಾನಿ ಪಟ್ಟದತ್ತ ದಾಪುಗಾಲು ಇಟ್ಟಿದ್ದಾರೆ.</p>.<p>ಈವರೆಗೆ ಶೇ 70ರಷ್ಟು ಮತಗಳನ್ನು ಎಣಿಕೆ ನಡೆದಿದ್ದು, ಲಿಬರಲ್ ಪಾರ್ಟಿ ನೇತೃತ್ವದ ಮೈತ್ರಿಕೂಟ 82 ಸ್ಥಾನಗಳಲ್ಲಿ ಗೆಲುವು ಅಥವಾ ಮುನ್ನಡೆ ಸಾಧಿಸಿದೆ. ವಿರೋಧ ಪಕ್ಷ ಲೇಬರ್ ಪಾರ್ಟಿ ಕೇವಲ 66 ಸ್ಥಾನಗಳಲ್ಲಿ ಮುನ್ನಡೆ ಅಥವಾ ಗೆಲುವು ಸಾಧಿಸಿದೆ.</p>.<p>ಆದರೂ, ಲಿಬರಲ್ ಪಕ್ಷ ಭಾರಿ ಬಹುಮತದಿಂದ ಗೆಲುವು ಸಾಧಿಸಲಿದೆಯೋ ಅಥವಾ ಸರಳ ಬಹುಮತವನ್ನಷ್ಟೇ ಪಡೆಯಲಿದೆಯೋ ಎಂಬ ಬಗ್ಗೆ ಇನ್ನೂ ಅಂತಿಮ ಚಿತ್ರಣ ಸಿಕ್ಕಿಲ್ಲ.ಕಳೆದ ಎರಡು ವರ್ಷಗಳಿಂದಲೂ ಲೇಬರ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.</p>.<p>ಸ್ಕಾಟ್ ಮಾರಿಸನ್ ಸರ್ಕಾರದ ಸಂಪುಟದ ಸದಸ್ಯರು ಪ್ರಚಾರ ನಡೆಸುವ ವೇಳೆ ಭಾರಿ ವಿರೋಧ ಮತ್ತು ಟೀಕೆಗಳು ವ್ಯಕ್ತವಾಗಿದ್ದವು.</p>.<p class="Subhead"><strong>ಹವಾಮಾನ ಬದಲಾವಣೆ ಚರ್ಚೆ: </strong>ಸುದೀರ್ಘ ಐದು ವಾರ ದೇಶದಾದ್ಯಂತ ನಡೆದ ಚುನಾವಣಾ ಪ್ರಚಾರದ ಪರಿಣಾಮ 1.6 ಕೋಟಿ ಜನ ಮತ ಚಲಾಯಿಸಿದ್ದಾರೆ.ಪ್ರಧಾನಿ ಸ್ಕಾಟ್ ಮಾರಿಸನ್ ಸಿಡ್ನಿಯಲ್ಲಿ ಹಕ್ಕು ಚಲಾಯಿಸಿದರೆ, ಲೇಬರ್ ಪಕ್ಷದ ನಾಯಕ ಬಿಲ್ ಶಾರ್ಟನ್ ಮೆಲ್ಬರ್ನ್ನಲ್ಲಿ ಮತ ಹಾಕಿದರು.ಹವಾಮಾನ ಬದಲಾವಣೆ ವಿಷಯವೇ ಈ ಚುನಾವಣೆಯಲ್ಲಿ ಮುಖ್ಯ ವಿಷಯವಾಗಿತ್ತು.</p>.<p>‘ಹವಾಮಾನ ಬದಲಾವಣೆ ಸಮಸ್ಯೆ ತೀವ್ರತರವಾಗುತ್ತಿದೆ. ಯಾವುದೂ ಆಸ್ಟ್ರೇಲಿಯಾಕ್ಕೆ ಪೂರಕವಾಗಿ ಸಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮುಂದಿನ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ’ ಎಂದು ಶಾರ್ಟನ್ ಪ್ರತಿಪಾದಿಸುತ್ತಿದ್ದರು.</p>.<p>‘ಹವಾಮಾನ ವೈಪರೀತ್ಯ ಕುರಿತು ನಿರ್ಲಕ್ಷ್ಯ ವಹಿಸಿದ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶವಿದೆ. ಎರಡು ಪಕ್ಷಗಳ ನಡುವೆ ಈ ವಿಷಯವೇ ನಿಜವಾದ ವ್ಯತ್ಯಾಸವಾಗಿದೆ’ ಎಂದು ಹೇಳಿದ್ದಾರೆ.</p>.<p>ಆಸ್ಟ್ರೇಲಿಯಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಪ್ರದೇಶಗಳು ಕಾಳ್ಗಿಚ್ಚಿಗೆ ನಾಶವಾಗುತ್ತಿರುವುದು, ’ಗ್ರೇಟ್ ಬ್ಯಾರಿಯರ್ ರೀಫ್’ನಂತಹ ನೈಸರ್ಗಿಕ ತಾಣಗಳು ಬೆಂಕಿಗೆ ಆಹುತಿಯಾಗುತ್ತಿರುವುದು ಹವಾಮಾನ ವೈಪರೀತ್ಯದ ಪರಿಣಾಮ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.</p>.<p>ಹವಾಮಾನ ಬದಲಾವಣೆ ಪರಿಣಾಮ ನಿಯಂತ್ರಣವೇ ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಶೇಕಡ 64ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದರು. ಹೊರಸೂಸುವಿಕೆ ಪ್ರಮಾಣವನ್ನು ಶೇಕಡ 45ಕ್ಕೆ ಕಡಿತಗೊಳಿಸುವುದಾಗಿ ಲೇಬರ್ ಪಕ್ಷ ಭರವಸೆ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>