ಲಂಡನ್: ಸ್ಕಾಟ್ಲೆಂಡ್ನ ಜಗ್ತಾರ್ ಸಿಂಗ್ ಜೋಹಲ್ ಅವರನ್ನು ಬಿಗಿ ಭದ್ರತೆಯಲ್ಲಿ ಪಂಜಾಬ್ನ ಜೈಲಿನಲ್ಲಿಟ್ಟುವ ಕುರಿತು ಭಾರತದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಬ್ರಿಟನ್ ಸರ್ಕಾರ ಹೇಳಿದೆ.
ಕೊಲೆ ಮತ್ತು ಕೊಲೆ ಪಿತೂರಿ ಆರೋಪಗಳನ್ನು ಎದುರಿಸುತ್ತಿರುವ ಜಗ್ತಾರ್ (30) ಅವರನ್ನು ಕಳೆದ ನವೆಂಬರ್ನಲ್ಲಿ ಬಂಧಿಸಲಾಗಿದ್ದು, ಪಂಜಾಬ್ನ ನಭ ಕೇಂದ್ರ ಕಾರಾ
ಗೃಹದಲ್ಲಿ ಇಡಲಾಗಿದೆ.
ಬ್ರಿಟನ್ ಸಂಸತ್ತಿನ ವೆಸ್ಟ್ಮಿನಿಸ್ಟರ್ ಹಾಲ್ನಲ್ಲಿ ಮಂಗಳವಾರ ಜಗ್ತಾರ್ ವಿಚಾರ ಪ್ರಸ್ತಾಪವಾಗಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಬ್ರಿಟನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಚಾರ ಚರ್ಚಿಸಬೇಕು’ ಎಂದು ಒತ್ತಾಯಿಸಲಾಗಿದೆ.