ದುಬೈ: ಶಾರ್ಜಾದ ಮೇಸಲೂನ್ನ ಮನೆಯೊಂದರಲ್ಲಿ 36 ವರ್ಷದ ಭಾರತ ಸಂಜಾತ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆ ಗಂಡನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೇರಳದ ಈ ಕುಟುಂಬ ಇಲ್ಲಿ ಬಂದು ನೆಲೆಸಿತ್ತು. ಮಹಿಳೆಯನ್ನು ಕೊಲೆ ಮಾಡಿ ಗಂಡ ಇಬ್ಬರು ಮಕ್ಕಳು ಭಾರತಕ್ಕೆ ಪಲಾಯನ ಮಾಡಿರುವ ಸಾಧ್ಯತೆ ಇದೆ.
ಶವವನ್ನು ಮನೆಯ ಕೊಠಡಿಯಲ್ಲಿ ಹೂಳಿದ್ದು, ಯಾರಿಗೂ ಅನುಮಾನ ಬಾರದಿರಲಿ ಎಂದು ಮನೆ ಎದುರು ‘ಬಾಡಿಗೆಗೆ’ ಎಂಬ ಫಲಕ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಕಾಣೆಯಾಗಿರುವುದರ ಬಗ್ಗೆ ಸಹೋದರ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.