ಮಾಲೆ: ದ್ವಿಪಕ್ಷೀಯವಾಗಿ ಚರ್ಚಿಸಬೇಕಾದ ವಿಷಯಗಳನ್ನು ಬಹುಪಕ್ಷೀಯ ವೇದಿಕೆಯಲ್ಲಿ ಪ್ರಸ್ತಾಪಿಸುವ ಮೂಲಕ ಭಾರತವು ‘ಸಾರ್ಕ್’ ಸಂಘಟನೆಯ ಆಶಯವನ್ನು ಹಾಳುಗೆಡವುತ್ತಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರೊಂದಿಗೆ ಮಂಗಳವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಕಳೆದ ಶೃಂಗಸಭೆಯಲ್ಲಿ ಮಾತ್ರವಲ್ಲ. ನಾಲ್ಕು ಬಾರಿ ಭಾರತ ಈ ರೀತಿ ಮಾಡಿದೆ’ ಎಂದಿದ್ದಾರೆ.