ನಿನಗೆ ರಸಮೊಂದೆ ಶಾಂತಮೆ? ಜಿನೇಂದ್ರ, ಮನಂ ಆ ರಸಾಂಬುಧಿಯೊಳಗೆ ಅವಗಾ-ಹನಂ ಇದರ್ು ಮಿಕ್ಕ ರಸಮಂಕನಸಿನೊಳಂ ನೆನೆಯದಂತು ಮಾಡೆನೆಗೆ ಅಹರ್ ||ಹೇ ಜಿನೇಂದ್ರ, ಕಾವ್ಯದ ನವ ರಸಗಳಲ್ಲಿ ಶಾಂತ ರಸ ಒಂದೇ ನಿನಗೆ ಒಪ್ಪಿತವಾದುದೇ? ಎಲೈ ಅರ್ಹಂತನೇ, ನಿನ್ನಂತೆ ಮಾಡುವ ಶಾಂತರಸವೆಂಬ ಸಮುದ್ರದೊಳಗೆ ನಮ್ಮ ಮನಸ್ಸು ಅವಗಾಹನವಾಗಲಿ (ಮುಳುಗಿರಲಿ). ಆಗ ಉಳಿದೆಲ್ಲ ಅಷ್ಟರಸಗಳು ಅಂದರೆ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಎಂಬ ಎಂಟು ರಸಗಳು ನಮ್ಮ ಕನಸ್ಸಿನಲ್ಲಿಯೂ ನೆನೆಪಿಗೆ ಬಾರದಿರಲಿ. ಈ ಶೃಂಗಾರಾದಿ ರಸಗಳನ್ನು ರಾಗ ಮತ್ತು ದ್ವೇಷ ಎಂಬ ಎರಡು ಗುಂಪುಗಳಲ್ಲಿ ವಿಂಗಡಿಸಬಹುದು. ಈ ರಾಗ-ದ್ವೇಷಗಳು ಎಲ್ಲಿಯವರೆಗೆ ಜೀವನಲ್ಲಿರುವುದೋ ಅಲ್ಲಿಯವರೆಗೆ ಸಂಸಾರ ಚಕ್ರದಲ್ಲಿ ಸುತ್ತಾಟ ಇದ್ದೇ ಇರುವುದು. ಈ ಚಕ್ರದಿಂದ ಮುಕ್ತನಾಗಬೇಕಾದರೆ, ನಮ್ಮ ಮನಸ್ಸು ಶಾಂತ ರಸದಲ್ಲೇ ತಲ್ಲೀನ ಆಗಬೇಕು. ಅವನೇ ವೀತರಾಗಿ, ಅವನೇ ಜಿನ. ಮೇಲಿನ ಜಿನಸ್ತುತಿಯ ಆಶಯದಂತೆ ಜೈನರು ಶಾಂತಿಯ ಆರಾಧಕರು. ಅವರಿಗೆ ಶಾಂತಿಯೇ