‘ಅರಣ್ಯ ಬಿಟ್ಟು ಹೊರಬಾರದಂತೆ ಅರಣ್ಯಾಧಿಕಾರಿಗಳು ಕಾಡುಕೋಣಗಳನ್ನು ಕಾಯಬೇಕು. ಇಲ್ಲವೇ, ಜಮೀನುಗಳಿಗೆ ನುಗ್ಗಿ ಬೆಳೆ ಹಾಳು ಮಾಡುವ ಅವುಗಳನ್ನು ಕೊಲ್ಲಲು ಅನುಮತಿ ನೀಡಬೇಕು. ಆನೆ ಹಾವಳಿ, ಮಂಗಗಳ ಹಾವಳಿ ಮಿತಿ ಮೀರಿದೆ. ಬದುಕು ನಡೆಸುವುದೇ ದುಸ್ತರವಾಗಿದೆ. ಇದಕ್ಕೆ ಸೂಕ್ತ ಪರಿಹಾರ ಹುಡುಕಿಕೊಡಿ. ಇಲ್ಲವೇ, ಇಡೀ ತೀರ್ಥಹಳ್ಳಿ ತಾಲ್ಲೂಕು ಬೇರೆ ಕಡೆ ಸ್ಥಳಾಂತರಿಸಿದರೆನೆಮ್ಮದಿಯ ಜೀವನ ನಡೆಸುತ್ತೇವೆ’ ಎಂದು ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣ ಅವರಲ್ಲಿ ಮನವಿ ಮಾಡಿದರು.