ಕಾರ್ನಾಡ್ಗೆ ಫೆಲೋಷಿಪ್, ಶಂಭು ಹೆಗಡೆಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ
ನವದೆಹಲಿ, ಮೇ 31 (ಪಿಟಿಐ)–ಗಿರೀಶ್ ಕಾರ್ನಾಡ್ (ರಂಗಭೂಮಿ), ಕೆರೆಮನೆ ಶಂಭು ಹೆಗಡೆ (ಯಕ್ಷಗಾನ), ಮೃಣಾಲಿನಿ ಸಾರಾಭಾಯ್ (ನೃತ್ಯ), ರಹೀಂ ಫಾಹಿಮುದ್ದೀನ್ ಡಾಗರ್ (ಹಿಂದೂಸ್ತಾನಿ ಸಂಗೀತ) ಮತ್ತು ಕುನ್ನಕುಡಿ ವೈದ್ಯನಾಥನ್ (ಕರ್ನಾಟಕ ವಾದ್ಯ ಸಂಗೀತ) ಸೇರಿದಂತೆ 27 ಪ್ರಸಿದ್ಧ ಕಲಾವಿದರು ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್ ಮತ್ತು ಪ್ರದರ್ಶನ ಕಲೆಯ ವಿವಿಧ ಕ್ಷೇತ್ರಗಳಲ್ಲಿ ತೋರಿದ ಅಪ್ರತಿಮ ಪ್ರತಿಭೆಗೆ 1993ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.