6 ಶಾಸಕರು ಸೇರಿ 33 ಬಂಡಾಯ ಕಾಂಗೈ ಅಭ್ಯರ್ಥಿಗಳ ಉಚ್ಚಾಟನೆ
ಬೆಂಗಳೂರು, ನ. 14– ವಿಧಾನಸಭೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಹಾಲಿ ಶಾಸಕರಾದ ಜಿ.ಎಸ್. ಶಿವನಂಜಪ್ಪ, ರೇಣುಕಾ ರಾಜೇಂದ್ರನ್, ಎ.ವಿ. ಉಮಾಪತಿ, ಡಿ.ಕೆ. ಶಿವಕುಮಾರ್, ಎಸ್.ವಿ. ಅಶ್ವತ್ಥ
ನಾರಾಯಣರೆಡ್ಡಿ, ಕೆ. ಭೀಮಣ್ಣ ಸೇರಿದಂತೆ 33 ಜನರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.