ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಶನಿವಾರ, 1–4–1995

Last Updated 31 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಯುಗಾದಿ ಸಂಭ್ರಮ; ಕಲಾಪ ಸುಗಮ
ಬೆಂಗಳೂರು, ಮಾರ್ಚಿ 31–
ಮರಳಿ ಬಂದ ಯುಗಾದಿ ಆಚರಿಸಲು ಊರುಗಳಿಗೆ ತೆರಳಲು ತುದಿಗಾಲ ಮೇಲೆ ನಿಂತಿದ್ದ ಸದಸ್ಯರು ಇಂದು, ವಾರಪೂರ್ತಿ ನಡೆದ ಬಿಸಿ ವಾಗ್ವಾದ, ಕಹಿ ಅನುಭವಗಳನ್ನು ಮರೆತು ಉಭಯ ಸದನಗಳಲ್ಲೂ ಸುಗಮವಾಗಿ ಕಲಾಪ ಮುಗಿಸಿದರು.

ಇಷ್ಟರ ಮಧ್ಯೆಯೂ, ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಉಚಿತ ವಿದ್ಯುತ್‌ ಪೂರೈಸಬೇಕೆಂದು ಒತ್ತಾಯಿಸಿ ವಿಧಾನಸಭೆಯಲ್ಲಿ ಕರ್ನಾಟಕ ಕಾಂಗ್ರೆಸ್‌ ಪಕ್ಷದ ಸದಸ್ಯರು, ಬಜೆಟ್‌ ಶ್ರೀಮಂತರ ಪರ ಎಂದು ವಿರೋಧಿಸಿ ಪರಿಷತ್‌ನಲ್ಲಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ದೊಡ್ಡವರ ಮಕ್ಕಳು
ನವದೆಹಲಿ, ಮಾರ್ಚಿ 31 (ಪಿಟಿಐ)
– ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರ ಪತ್ನಿ ಹಿಲರಿ ಅವರು ತಮ್ಮ ಅಧಿಕೃತ ಕಾರ್ಯಕ್ರಮಗಳತ್ತಲೇ ಗಮನಹರಿಸಿರುವುದನ್ನು ಕಂಡು ಬೇಸತ್ತ ಅವರ ಪುತ್ರಿ ಚೆಲ್ಸಿಯಾ ಇಂದು ರಾಷ್ಟ್ರಪತಿ ಭವನದಲ್ಲಿ ಸಂತೋಷವಾಗಿ ಕಳೆದಳು.

ಸುಮಾರು ಮೂರು ತಾಸು ರಾಷ್ಟ್ರಪತಿ ಭವನದಲ್ಲಿದ್ದ ಆಕೆ, ರಾಷ್ಟ್ರಪತಿ ಡಾ. ಶಂಕರ್‌ ದಯಾಳ್‌ ಶರ್ಮಾ ಅವರ ಮೊಮ್ಮಕ್ಕಳಾದ ಆವಂತಿಕಾ, ಶ್ರೇಯಾ, ತನ್ಯಾ ಹಾಗೂ ಸೌಮ್ಯ ಅವರೊಂದಿಗೆ ಆಟವಾಡಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT