<p><strong>ಯುಗಾದಿ ಸಂಭ್ರಮ; ಕಲಾಪ ಸುಗಮ<br />ಬೆಂಗಳೂರು, ಮಾರ್ಚಿ 31–</strong> ಮರಳಿ ಬಂದ ಯುಗಾದಿ ಆಚರಿಸಲು ಊರುಗಳಿಗೆ ತೆರಳಲು ತುದಿಗಾಲ ಮೇಲೆ ನಿಂತಿದ್ದ ಸದಸ್ಯರು ಇಂದು, ವಾರಪೂರ್ತಿ ನಡೆದ ಬಿಸಿ ವಾಗ್ವಾದ, ಕಹಿ ಅನುಭವಗಳನ್ನು ಮರೆತು ಉಭಯ ಸದನಗಳಲ್ಲೂ ಸುಗಮವಾಗಿ ಕಲಾಪ ಮುಗಿಸಿದರು.</p>.<p>ಇಷ್ಟರ ಮಧ್ಯೆಯೂ, ರೈತರ ಪಂಪ್ಸೆಟ್ಗಳಿಗೆ ನಿರಂತರವಾಗಿ ಉಚಿತ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿ ವಿಧಾನಸಭೆಯಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಸದಸ್ಯರು, ಬಜೆಟ್ ಶ್ರೀಮಂತರ ಪರ ಎಂದು ವಿರೋಧಿಸಿ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.</p>.<p><strong>ದೊಡ್ಡವರ ಮಕ್ಕಳು<br />ನವದೆಹಲಿ, ಮಾರ್ಚಿ 31 (ಪಿಟಿಐ)</strong>– ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಪತ್ನಿ ಹಿಲರಿ ಅವರು ತಮ್ಮ ಅಧಿಕೃತ ಕಾರ್ಯಕ್ರಮಗಳತ್ತಲೇ ಗಮನಹರಿಸಿರುವುದನ್ನು ಕಂಡು ಬೇಸತ್ತ ಅವರ ಪುತ್ರಿ ಚೆಲ್ಸಿಯಾ ಇಂದು ರಾಷ್ಟ್ರಪತಿ ಭವನದಲ್ಲಿ ಸಂತೋಷವಾಗಿ ಕಳೆದಳು.</p>.<p>ಸುಮಾರು ಮೂರು ತಾಸು ರಾಷ್ಟ್ರಪತಿ ಭವನದಲ್ಲಿದ್ದ ಆಕೆ, ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಅವರ ಮೊಮ್ಮಕ್ಕಳಾದ ಆವಂತಿಕಾ, ಶ್ರೇಯಾ, ತನ್ಯಾ ಹಾಗೂ ಸೌಮ್ಯ ಅವರೊಂದಿಗೆ ಆಟವಾಡಿದಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯುಗಾದಿ ಸಂಭ್ರಮ; ಕಲಾಪ ಸುಗಮ<br />ಬೆಂಗಳೂರು, ಮಾರ್ಚಿ 31–</strong> ಮರಳಿ ಬಂದ ಯುಗಾದಿ ಆಚರಿಸಲು ಊರುಗಳಿಗೆ ತೆರಳಲು ತುದಿಗಾಲ ಮೇಲೆ ನಿಂತಿದ್ದ ಸದಸ್ಯರು ಇಂದು, ವಾರಪೂರ್ತಿ ನಡೆದ ಬಿಸಿ ವಾಗ್ವಾದ, ಕಹಿ ಅನುಭವಗಳನ್ನು ಮರೆತು ಉಭಯ ಸದನಗಳಲ್ಲೂ ಸುಗಮವಾಗಿ ಕಲಾಪ ಮುಗಿಸಿದರು.</p>.<p>ಇಷ್ಟರ ಮಧ್ಯೆಯೂ, ರೈತರ ಪಂಪ್ಸೆಟ್ಗಳಿಗೆ ನಿರಂತರವಾಗಿ ಉಚಿತ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿ ವಿಧಾನಸಭೆಯಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಸದಸ್ಯರು, ಬಜೆಟ್ ಶ್ರೀಮಂತರ ಪರ ಎಂದು ವಿರೋಧಿಸಿ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.</p>.<p><strong>ದೊಡ್ಡವರ ಮಕ್ಕಳು<br />ನವದೆಹಲಿ, ಮಾರ್ಚಿ 31 (ಪಿಟಿಐ)</strong>– ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಪತ್ನಿ ಹಿಲರಿ ಅವರು ತಮ್ಮ ಅಧಿಕೃತ ಕಾರ್ಯಕ್ರಮಗಳತ್ತಲೇ ಗಮನಹರಿಸಿರುವುದನ್ನು ಕಂಡು ಬೇಸತ್ತ ಅವರ ಪುತ್ರಿ ಚೆಲ್ಸಿಯಾ ಇಂದು ರಾಷ್ಟ್ರಪತಿ ಭವನದಲ್ಲಿ ಸಂತೋಷವಾಗಿ ಕಳೆದಳು.</p>.<p>ಸುಮಾರು ಮೂರು ತಾಸು ರಾಷ್ಟ್ರಪತಿ ಭವನದಲ್ಲಿದ್ದ ಆಕೆ, ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಅವರ ಮೊಮ್ಮಕ್ಕಳಾದ ಆವಂತಿಕಾ, ಶ್ರೇಯಾ, ತನ್ಯಾ ಹಾಗೂ ಸೌಮ್ಯ ಅವರೊಂದಿಗೆ ಆಟವಾಡಿದಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>