ಬಿಜೆಪಿ ಬಗ್ಗುಬಡಿಯಲು ಜಾತ್ಯಾತೀತ ರಂಗ ನವದೆಹಲಿ, ಏ.25– ಕೋಮುವಾದಿ ಭಾರತೀಯ ಜನತಾ ಪಕ್ಷವನ್ನು ಬಗ್ಗುಬಡಿಯಲು ಈಗ ಜಾತ್ಯಾತೀತ ರಂಗವೊಂದನ್ನು ರಚಿಸುವ ಅಗತ್ಯವಿರುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಕರೆ ನೀಡಿದ್ದಾರೆ.
ಬಿ.ಜೆ.ಪಿಯ ಮತೀಯವಾದವನ್ನು ಬೆಳೆಸದಂತೆ ತಡೆಯಲು ಮತ್ತು ಅದು ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಮತಗಳಿಸುವ ಯತ್ನವನ್ನು ವಿಫಲಗೊಳಿಸಲುಇದು ಅವಶ್ಯಕತೆ ಇದೆ ಎಂದು ತಿಳಿಸಿದರು.