ನವದೆಹಲಿ, ಜುಲೈ 26– ನ್ಯಾಯಮೂರ್ತಿ ಓ. ಚಿನ್ನಪ್ಪ ರೆಡ್ಡಿ ವರದಿಗೂ ರಾಜ್ಯ ಸರ್ಕಾರ ಕಳೆದ ಏಪ್ರಿಲ್ನಲ್ಲಿ ಹೊರಡಿಸಿದ ಮೀಸಲಾತಿ ಆಜ್ಞೆಗೂ ಯಾವುದೇ ತಾಳ ಮೇಳವಿಲ್ಲದ ಕಾರಣ, ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ಕೆಲವು ಜಾತಿಗಳು ಸಲ್ಲಿಸಿರುವ ಮನವಿ ಬಗೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ರಚಿಸಲಾಗಿರುವ ಹಿಂದುಳಿದ ಆಯೋಗ ಒಂದು ತೀರ್ಮಾನ ತೆಗೆದುಕೊಳ್ಳುವವರೆಗೆ ಆ ಆಜ್ಞೆಯನ್ನು ಹಿಂತೆಗೆದುಕೊಂಡು 1986ರ ತಾತ್ಕಾಲಿಕ ಆಜ್ಞೆಯನ್ನೇ ಮುಂದುವರೆಸಬೇಕೆಂದು ಕರ್ನಾಟಕ ಜನತಾದಳದ ಅಧ್ಯಕ್ಷ ಎಚ್.ಡಿ. ದೇವೇಗೌಡ ಇಂದು ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರನ್ನು ಒತ್ತಾಯಿಸಿದರು.