ಬೆಂಗಳೂರು, ಜುಲೈ 26– ಬ್ಯಾಂಕಿನಿಂದ ಹಣ ಪಡೆದು ಹಿಂದಿರುಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಇಬ್ಬರು ಅಪರಿಚಿತರು ಸಿನಿಮೀಯ ರೀತಿಯಲ್ಲಿ ಗುಂಡು ಹಾರಿಸಿ ಹಣ ಅಪಹರಿಸಿರುವ ಘಟನೆ ಇಂದು ಮಧ್ಯಾಹ್ನ ಜಯನಗರ ಟಿ. ಬ್ಲಾಕ್ನಲ್ಲಿ ನಡೆದಿದೆ. ಈ ಬೆಳವಣಿಗೆಯಿಂದ, ಚಾಕು ಚೂರಿಗಷ್ಟೇ ಸೀಮಿತವಾಗಿದ್ದ ಬೆಂಗಳೂರಿನ ಅಪರಾಧ ಜಗತ್ತಿಗೆ ಪಿಸ್ತೂಲು ಕೂಡ ಪ್ರವೇಶಿಸಿದಂತಾಗಿದೆ.