ನವದೆಹಲಿ, ಜೂನ್ 21– ಲೋಕಸಭೆಯಲ್ಲಿ 39 ಸದಸ್ಯಬಲವುಳ್ಳ ಜನತಾದಳದಲ್ಲಿನ 14 ಮಂದಿ ಸದಸ್ಯರು ಇಂದು ಸ್ಪೀಕರ್ ಶಿವರಾಜ್ ಪಾಟೀಲ್ ಅವರನ್ನು ಭೇಟಿಯಾಗಿ ತಮಗೆ ಲೋಕಸಭೆಯಲ್ಲಿ ಪ್ರತ್ಯೇಕ ಸ್ಥಾನಗಳನ್ನು ನೀಡಬೇಕೆಂಬ ಮನವಿಯನ್ನು ಸಲ್ಲಿಸಿದ್ದರಿಂದ, ಭಿನ್ನಮತ ಮತ್ತು ಒಡಕಿಗೆ ಒಳಗಾದ ಜನತಾದಳವು ರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಇಬ್ಭಾಗವಾಯಿತು. ಇಂದಿನ ಬೆಳವಣಿಗೆಯ ಪರಿಣಾಮವಾಗಿ ರಾಜ್ಯಗಳಲ್ಲೂ ದಳ ಒಡೆಯುವ ಸಾಧ್ಯತೆಯೇ ಹೆಚ್ಚು.