ವಿಶೇಷವಾಗಿ ಗ್ರಾಮೀಣ ಕ್ಷೇತ್ರಕ್ಕೆ ನೀಡುವ ಸಾಲ ಮನ್ನಾ ಚಾಳಿ ಹೆಚ್ಚುತ್ತಿದೆ. ಆದರೆ, ಗ್ರಾಮೀಣ ಕ್ಷೇತ್ರದ ಸಾಲ ಯೋಜನೆಗಳು ಆಯಾ ಸಾಲ ನೀಡಿಕೆ ಸಂಸ್ಥೆಗಳ ಅವಸಾನಕ್ಕೆ ಕಾರಣವಾಗದೆ, ಬದುಕಿ ಉಳಿಯಲು ಸೂಕ್ತ ವಾತಾವರಣ ಕಲ್ಪಿಸುವಂತೆ ಇರಬೇಕು. ಬಡ್ಡಿ ಸಹಾಯಧನಕ್ಕಿಂತ ಸಕಾಲಕ್ಕೆ ಮತ್ತು ಅಗತ್ಯ ಪ್ರಮಾಣದಷ್ಟು ಸಾಲ ದೊರೆಯುವಂತೆ ಮಾಡುವುದು ಹೆಚ್ಚು ಮಹತ್ವದ್ದು ಎಂದು ಅದು ತನ್ನ ವಾರ್ಷಿಕ ವರದಿಯಲ್ಲಿ ಕಿವಿಮಾತು ಹೇಳಿದೆ.