ಪತ್ರಕರ್ತರೊಡನೆ ಮಾತನಾಡುತ್ತಿದ್ದ ಶ್ರೀ ನಿಜಲಿಂಗಪ್ಪನವರು ಈ ಸಂಬಂಧದಲ್ಲಿ ತಾವು ಸರ್ವಾಧಿಕಾರಿಯಂತೆ ಕೇಂದ್ರಕ್ಕೆ ಆಜ್ಞೆ ಮಾಡಲಾಗದೆಂದೂ ತಾವು ತಮ್ಮ ಅಭಿಪ್ರಾಯ ಮಾತ್ರ ವ್ಯಕ್ತಪಡಿಸಿರುವುದಾಗಿಯೂ ನುಡಿದರು. ರಾಜ್ಯದ ಸಮಸ್ಯೆಗಳ ಇತ್ಯರ್ಥಕ್ಕೆ ಮೂರು ಮಾರ್ಗ ಮಾತ್ರ ಇದೆಯೆಂದು ಅವರು ನುಡಿದು ವೈಯುಕ್ತಿಕ ಆಸ್ತಿಪಾಸ್ತಿ ಮುಂತಾದವುಗಳ ಮೇಲೆ ಮುತ್ತಿಗೆ ಸಂವಿಧಾನ ಮತ್ತು ಶಾಸನದ ಉಲ್ಲಂಘನೆಯಾದುದರಿಂದ ಸರಕಾರಕ್ಕೆ ವಿವೇಕೋದಯವಾಗಿ ಈ ಬಗೆಗೆ ಕ್ರಮ ತೆಗೆದುಕೊಳ್ಳಬೇಕೆಂದೂ,ಅದು ತಪ್ಪಿ
ದರೆ ಸರಕಾರವನ್ನು ಕೊನೆಗಾಣಿಸಲು ಜನತೆ ಚಳವಳಿ ಹೂಡಬೇಕೆಂದೂ ಕೇಂದ್ರದ ಮಧ್ಯಪ್ರವೇಶ ತೃತೀಯ ಮಾರ್ಗವೆಂದು ಹೇಳಿದರು.